Friday, September 7, 2012

ಸುಮಧುರ ಕಂಠದ ಸಾಯಿ ಭಜನ ಗಾಯಕಿ - ಶ್ರೀಮತಿ.ವಂದನಾ ಕಾಮತ್  - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀಮತಿ.ವಂದನಾ ಕಾಮತ್ ರವರು ಕರ್ನಾಟಕದ ಬೆಂಗಳೂರಿನಲ್ಲಿ ತಮ್ಮ ಸುಮಧುರ ಸಾಯಿ ಭಜನ ಗಾಯನದಿಂದ ಮನೆ ಮಾತಾಗಿದ್ದಾರೆ. ಇವರು 22ನೇ ಅಕ್ಟೋಬರ್ 1960 ರಂದು  ಕರ್ನಾಟಕದ ದಾವಣಗೆರೆಯಲ್ಲಿ ಶ್ರೀಮತಿ.ಲಲಿತಾ ವಸಂತ ಕುಮಾರ್ ಮತ್ತು ಶ್ರೀ.ವಸಂತ ಕುಮಾರ್ ರವರ ಮಗಳಾಗಿ ಜನಿಸಿದರು.

ಇವರು 1998 ನೇ ಇಸವಿಯಲ್ಲಿ "ಸಾಯಿ ಸ್ಮರಣ್ ಭಜನ ಮಂಡಳಿ" ಯನ್ನು ಸ್ಥಾಪಿಸಿ ಮಂಡಳಿಯ ಸದಸ್ಯರೊಂದಿಗೆ ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಹಾಗೂ ಭಕ್ತರ ಮನೆಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಕರ್ನಾಟಕದ ಬೆಂಗಳೂರು, ಸೋಮನಹಳ್ಳಿ, ಚಿಂತಾಮಣಿ, ಮೈಸೂರು, ಶಿವಗಂಗೆ, ಮುದ್ದೇನಹಳ್ಳಿ, ರಾಮನಗರ, ಕುಣಿಗಲ್, ಹಾಸನ, ಅಂಧ್ರಪ್ರದೇಶದ ಹಿಂದೂಪುರ ಹಾಗೂ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಸಂಸ್ಥಾನವನ್ನು ಒಳಗೊಂಡಂತೆ ಇಲ್ಲಿಯವರೆಗೂ ಸುಮಾರು 750ಕ್ಕೂ ಹೆಚ್ಚು ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.


ಅಲ್ಲದೆ, ಪ್ರತಿ ವರ್ಷ ಹಲವಾರು ಸಾಯಿ ಭಕ್ತರೊಂದಿಗೆ ಶಿರಡಿ ಯಾತ್ರೆಯನ್ನು ಕೈಗೊಂಡು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಸಮಾಧಿ ಮಂದಿರದಲ್ಲಿ ಭಜನೆಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ.

ಶ್ರೀಮತಿ.ವಂದನಾ ಕಾಮತ್ ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀಮತಿ.ವಂದನಾ ಕಾಮತ್
ಸಾಯಿ ಸ್ಮರಣ್ ಭಜನ ಮಂಡಳಿ,
"ಸಾಯಿ ಸಂಸಾರ್", 1/2, 1ನೇ ಬ್ಲಾಕ್,
ತ್ಯಾಗರಾಜನಗರ, ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ,
ಬೆಂಗಳೂರು - 560 028,
ಕರ್ನಾಟಕ, ಭಾರತ

ದೂರವಾಣಿ ಸಂಖ್ಯೆಗಳು:
+91 80 2676 3897 / +91 97417 22422


ಕನ್ನಡ ಅನುವಾದ: ಶ್ರೀಕಂಠ ಶರ್ಮ


No comments:

Post a Comment