Friday, September 21, 2012

ಹೊಸೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದೇವ್ ಸಾಯಿ ಮಂದಿರ, ಶ್ರೀ ಸಾಯಿಬಾಬಾ ನಗರ, ಸೂರ್ಯ ಆಸ್ಪತ್ರೆ ಎದುರುಗಡೆ, ಟ್ಯಾಂಕ್ ರಸ್ತೆ, ಹೊಸೂರು-635 109, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಟ್ಟಣದ ಟ್ಯಾಂಕ್ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ನಗರದಲ್ಲಿ ಇರುತ್ತದೆ. ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 2001 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಖರೀದಿಸಿದ 25 ಸೆಂಟ್ ಸ್ವಂತ ಭೂಮಿಯಲ್ಲಿ  ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು ಪವಿತ್ರ ಜ್ಯೇಷ್ಟ ಬಹುಳ ತದಿಗೆ (26ನೇ ಜೂನ್ 2002) ಯಂದು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಸಂಜೀವ್ ಡಿ. ರಂಕಾರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ಲಕ್ಷ್ಮೀನಾರಾಯಣನ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 2-1/2  ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಕಪ್ಪು ಶಿಲೆಯ ಹಾಗೂ ಅಮೃತಶಿಲೆಯ ಗಣಪತಿ, ಅಮೃತಶಿಲೆಯ ಲಕ್ಷ್ಮಿ, ಸರಸ್ವತಿಯ ವಿಗ್ರಹಗಳು ಹಾಗೂ ಅಮೃತಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.

















ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 7:00 ರಿಂದ 12:00.
ಸಂಜೆ : 5:30 ರಿಂದ 8:30.

ಆರತಿಯ ಸಮಯ:

ಕಾಕಡಾ ಆರತಿ : 07:00 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 06:00 ಗಂಟೆ
ಶೇಜಾರತಿ      : 08:00 ಗಂಟೆ


ಪ್ರತಿದಿನ ಬೆಳಿಗ್ಗೆ 7:00 ಕ್ಕೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 100/- ರೂಪಾಯಿಗಳು.

ಪ್ರತಿ ದಿನ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 5/- ರೂಪಾಯಿಗಳು.

ಪ್ರತಿ ಸೋಮವಾರ ಸಂಜೆ 06:00 ರಿಂದ 7:30 ಗಂಟೆಯವರೆಗೆ ಸಾಯಿ ಭಜನೆಯನ್ನು ಮಾಡಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6:30 ರಿಂದ 8:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು  ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ ಜ್ಯೇಷ್ಟ ಬಹುಳ ತದಿಗೆಯಂದು ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಸೂರ್ಯ ಆಸ್ಪತ್ರೆಯ ಎದುರುಗಡೆ, ಟ್ಯಾಂಕ್ ರಸ್ತೆ, ಶ್ರೀ ಸಾಯಿಬಾಬಾ ನಗರ, ಹೊಸೂರು.
.

ವಿಳಾಸ:
ಶ್ರೀ ದೇವ್ ಸಾಯಿ ಮಂದಿರ,
ಶ್ರೀ ಸಾಯಿಬಾಬಾ ನಗರ,
ಸೂರ್ಯ ಆಸ್ಪತ್ರೆ ಎದುರುಗಡೆ, ಟ್ಯಾಂಕ್ ರಸ್ತೆ,
ಹೊಸೂರು-635 109, ಕೃಷ್ಣಗಿರಿ ಜಿಲ್ಲೆ,
ತಮಿಳುನಾಡು, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸಂಜೀವ್ ಡಿ.ರಂಕಾ - ಅಧ್ಯಕ್ಷರು / ಶ್ರೀ.ಲಕ್ಷ್ಮೀನಾರಾಯಣನ್.

ದೂರವಾಣಿ ಸಂಖ್ಯೆಗಳು:
+91 4344 242599 (ಸ್ಥಿರ ದೂರವಾಣಿ) / + 91 98440 03436 / +91 94433 26991 



ಇ ಮೇಲ್ ವಿಳಾಸ: 
rankasanjeev@gmail.com 

ಮಾರ್ಗಸೂಚಿ:
ಹೊಸೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದ ಹಿಂಭಾಗದಲ್ಲಿ ಗಾಂಧಿ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ 5 ನಿಮಿಷಗಳ ಕಾಲ ನೆಡೆಯುವುದು. ದೇವಾಲಯವು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಟ್ಟಣದ ಟ್ಯಾಂಕ್ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ನಗರದಲ್ಲಿ ಇರುತ್ತದೆ. ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment