Saturday, September 1, 2012

ಸಾಯಿ ಸಮರ್ಥ ಟ್ರಸ್ಟ್ ನ ವತಿಯಿಂದ ಈಶಾನ್ಯ ರಾಜ್ಯದ ಜನರಿಗೆ ಸಹಾಯ ಹಸ್ತ - ಕೃಪೆ: ಸಾಯಿಅಮೃತಧಾರಾ.ಕಾಂ


ಸಾಯಿ ಸಮರ್ಥ ಟ್ರಸ್ಟ್, ಕೋರಮಂಗಲ, ಬೆಂಗಳೂರಿನ ಟ್ರಸ್ಟಿಗಳು ಹಾಗೂ ಸದಸ್ಯರುಗಳು ಕಳೆದ ತಿಂಗಳ 18ನೇ ಆಗಸ್ಟ್ 2012, ಶನಿವಾರದಂದು ಬೆಂಗಳೂರಿನ ಮೆಜಿಸ್ಟಿಕ್ ನ ಬಳಿಯಿರುವ ಸಿಟಿ ರೈಲು ನಿಲ್ದಾಣದಲ್ಲಿ ಸಂತ್ರಸ್ತರಾಗಿದ್ದ ಸಾವಿರಾರು ಪ್ರಯಾಣಿಕರಿಗೆ ಮಿನರಲ್ ವಾಟರ್ ಹಾಗೂ ತಿಂಡಿಯನ್ನು ನೀಡುವ ಮುಖಾಂತರ ತಮ್ಮ ಸೌಹಾರ್ದತೆಯನ್ನು ಮತ್ತು ಹೃದಯ ವೈಶಾಲ್ಯತೆಯನ್ನು ಮೆರೆದರು.

ತಮ್ಮ ರಾಜ್ಯದ ಜನರ ಮೇಲೆ ದೇಶಾದ್ಯಂತ ಹಲ್ಲೆ ನಡೆಯುತ್ತಿದೆಯೆಂಬ ಉಹಾಪೋಹಗಳಿಂದ ಹೆದರಿ ಕಂಗಾಲಾಗಿದ್ದ ಬೆಂಗಳೂರಿನಲ್ಲಿ ನೆಲೆಸಿದ್ದ ಈಶಾನ್ಯ ರಾಜ್ಯದ ಜನರು ತಮ್ಮ ಗಂಟು-ಮೊಟೆಗಳನ್ನು ಕಟ್ಟಿಕೊಂಡು 15ನೇ ಆಗಸ್ಟ್ 2012, ಬುಧವಾರದಿಂದ ತಮ್ಮ ರಾಜ್ಯಕ್ಕೆ ಮರಳಿ ಹೋಗಲು ಪ್ರಾರಂಭಿಸಿದರೆಂಬ ವಿಷಯವನ್ನು ನಿಮ್ಮ ಅವಗಾಹನೆಗೆ ತರಲು ನಾವು ಬಯಸುತ್ತೇವೆ.

ಅಂದು ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಈ ಕೆಳಗೆ ಲಗತ್ತಿಸಲಾಗಿದೆ: 













ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment