Tuesday, June 19, 2012

ಗುರುಪೂರ್ಣಿಮೆಯ ಅಂಗವಾಗಿ ಬೆಂಗಳೂರು, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಿರಡಿ ಸಾಯಿಬಾಬಾರವರು ನಿಮೋಣ್ಕರ್ ರವರಿಗೆ ನೀಡಿದ  ಪವಿತ್ರ ಪಾದುಕೆಗಳ ಆಗಮನ - ಕೃಪೆ: ಸಾಯಿಅಮೃತಧಾರಾ.ಕಾಂ 

ಗುರುಪೂರ್ಣಿಮೆಯ ಅಂಗವಾಗಿ ಶಿರಡಿ ಸಾಯಿಬಾಬಾರವರು ನಿಮೋಣ್ಕರ್ ರವರಿಗೆ ನೀಡಿದ  ಪವಿತ್ರ ಪಾದುಕೆಗಳನ್ನು ಮುಂದಿನ ತಿಂಗಳ 1ನೇ ಜುಲೈ 2012, ಭಾನುವಾರದಂದು ಶಿರಡಿಯಿಂದ ಬೆಂಗಳೂರಿಗೆ  ತರಲಾಗುತ್ತಿದ್ದು 1ನೇ ಜುಲೈ 2012, ಭಾನುವಾರದಿಂದ  6ನೇ ಜುಲೈ 2012, ಶುಕ್ರವಾರದವರಗೆ ಪವಿತ್ರ ಪಾದುಕೆಗಳು ಬೆಂಗಳೂರು, ಕೋಲಾರ ಮತ್ತು ಮೈಸೂರು ಜಿಲ್ಲೆಯ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ದರ್ಶನಕ್ಕೆ ಲಭ್ಯವಿರುತ್ತದೆ.

ಸಾಯಿಭಕ್ತರು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಂಡು ಸಾಯಿಬಾಬಾರವರ ಪಾದುಕೆಗಳ ದರ್ಶನವನ್ನು ಪಡೆದು ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಈ ಮುಖಾಂತರ ಮನವಿ ಮಾಡಿಕೊಳ್ಳಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ಲಗತ್ತಿಸಿರುವ ಆಮಂತ್ರಣ ಪತ್ರವನ್ನು ಸಾಯಿಭಕ್ತರು ನೋಡಬಹುದು.
 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment