Thursday, March 1, 2012

ಶ್ರೀ ಸದ್ಗುರು ಚೈತನ್ಯ ಮಂದಿರ, ಬೆಂಗಳೂರು ವತಿಯಿಂದ ಶ್ರೀ.ದಕ್ಷಿಣಾಮುರ್ತಿ, ಶ್ರೀ.ದತ್ತಾತ್ರೇಯ ಹಾಗೂ ಶ್ರೀ.ಸದ್ಗುರು   ಶಿಲಾಪಾದುಕಾ ಪ್ರತಿಷ್ಟಾಪನೆ - ಕೃಪೆ: ಶ್ರೀ.ಕೆ.ಎನ್.ವೆಂಕಟನಾರಾಯಣ, ಅಧ್ಯಕ್ಷರು, ಶ್ರೀ.ಸದ್ಗುರು ಸೇವಾ ಟ್ರಸ್ಟ್ (ನೋಂದಣಿ), ಬೆಂಗಳೂರು 

ಬೆಂಗಳೂರಿನ  ಭಾರತ್ ಹೌಸಿಂಗ್ ಬಡಾವಣೆಯಲ್ಲಿರುವ ಶ್ರೀ ಸದ್ಗುರು ಚೈತನ್ಯ ಮಂದಿರದ ವತಿಯಿಂದ ಇದೇ ತಿಂಗಳ 4ನೇ ಮಾರ್ಚ್ 2012, ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ ಶ್ರೀ.ದಕ್ಷಿಣಾಮುರ್ತಿ, ಶ್ರೀ.ದತ್ತಾತ್ರೇಯ ಹಾಗೂ ಶ್ರೀ.ಸದ್ಗುರು   ಶಿಲಾಪಾದುಕಾ ಪ್ರತಿಷ್ಟಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳು ಈ ವಿಗ್ರಹಗಳ ಪ್ರತಿಷ್ಟಾ ಕುಂಭಾಭಿಷೇಕ ಮಹೋತ್ಸವವನ್ನು ನೆರವೇರಿಸಿ ಅನುಗ್ರಹ ಭಾಷಣವನ್ನು ಮಾಡಲಿದ್ದಾರೆ.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಡಾ.ವಿ.ಆರ್.ಗೌರಿಶಂಕರ್ ರವರು ಭಾಗವಹಿಸಲಿದ್ದಾರೆ. 

ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಆಹ್ವಾನ ಪತ್ರಿಕೆಯನ್ನು  ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗತ್ತಿಸಲಾಗಿದೆ:






ಪುಣ್ಯಪ್ರದವಾದ ಈ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರುದೇವತಾನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಸದ್ಗುರು ಸೇವಾ ಟ್ರಸ್ಟ್ ನ ಆಡಳಿತ ಮಂಡಳಿಯವರು ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 
 

No comments:

Post a Comment