Thursday, February 2, 2012

ಸಾಯಿ ಭಜನ ಗಾಯಕ, ಗೀತ ರಚನಕಾರ ಹಾಗೂ ಸಂಗೀತ ನಿರ್ದೇಶಕ - ಶ್ರೀ.ಸಾಯಿ ವಿಶಾಲ್ ದಾಸ್   - ಕೃಪೆ: ಸಾಯಿ ಅಮೃತಧಾರಾ.ಕಾಂ  


ಅನನ್ಯ ಸಾಯಿ ಭಕ್ತರಾದ ಶ್ರೀ.ಸಾಯಿ ವಿಶಾಲ್ ದಾಸ್ ರವರು ಪ್ರಖ್ಯಾತ ಸಾಯಿ ಭಜನ ಗಾಯಕರು, ಗೀತ ರಚನಕಾರರು ಮತ್ತು ಸಂಗೀತ ನಿರ್ದೇಶಕರೂ ಆಗಿದ್ದು ಅನೇಕ ಮನಮುಟ್ಟುವ ಸಾಯಿ ಭಜನೆಗಳನ್ನು ಹಾಡಿ ಸಾಯಿ ಭಕ್ತರನ್ನು ರಂಜಿಸಿದ್ದಾರೆ. ಇವರು ಇಲ್ಲಿಯವರೆವಿಗೂ ಸರಿ ಸುಮಾರು 1000 ಕ್ಕೂ ಹೆಚ್ಚು  ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಭಾರತ ದೇಶದ ಉದ್ದಗಲಕ್ಕೂ ನೀಡಿರುತ್ತಾರೆ. 

ಇವರು ಶಿರಡಿ ಸಾಯಿಬಾಬಾರವರ ಮೇಲೆ ಅನೇಕ ಕವನಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ "ತೇರಿ ಶಿರಡಿ ಕಾ ನಜಾರಾ", "ಮೇರೆ  ಸಾಯಿ ಕಿ ಸೌಗಾತ್", "ಸಾಯಿ ಕೆ ದೇನ್", "ಯೇ ಬಾಬಾ ನಯೇ ಜಮಾನೇ ಕೆ", "ಸಾಯಿ ಕೆ ಪ್ರೇರಣಾ", "ಸಾಯಿ ಕಾ ಇಂತಜಾರ್" ಮತ್ತು "ತಮನ್ನಾ ಹೈ ದಿಖೆ ಸಾಯಿ" ಕವನಗಳು ಅತ್ಯಂತ ಜನಪ್ರಿಯವಾಗಿರುತ್ತವೆ. 

ಇವರು ಶಿರಡಿ ಸಾಯಿಬಾಬಾರವರ ಮೇಲೆ ಎರಡು ಅಲ್ಬಮ್ ಗಳನ್ನು ಹೊರತಂದಿದ್ದಾರೆ. ಅವುಗಳೆಂದರೆ "ಮೇರಿ ಸಮಾಧಿ ಬೋಲೇಗಿ" ಮತ್ತು "ಸಾಯಿ ಆಸರಾ". 

ಶ್ರೀ.ಸಾಯಿ ವಿಶಾಲ್ ದಾಸ್ ರವರು ಪ್ರಸ್ತುತ ನವದೆಹಲಿಯಲ್ಲಿ ವಾಸವಾಗಿರುತ್ತಾರೆ. ಇವರನ್ನು ಸಂಪರ್ಕಿಸಲು ಇಚ್ಚಿಸುವ ಸಾಯಿ ಭಕ್ತರು ಮೊಬೈಲ್ ಸಂಖ್ಯೆ: +91 98915 11236/+91 92123 22060 ಅಥವಾ ಇಮೇಲ್ ವಿಳಾಸ contact@saivishaldas.org  ವನ್ನು ಸಂಪರ್ಕಿಸಬಹುದಾಗಿದೆ. 

ಶ್ರೀ ಸಾಯಿ ವಿಶಾಲ್ ದಾಸ್ ರವರ ಬಗ್ಗೆ ಮತ್ತು ಅವರ ಕವನಗಳು ಹಾಗೂ ಸಾಯಿ ಭಜನೆಯ ಆಲ್ಬಮ್ ಗಳಿಗಾಗಿ http://www.saivishaldas.org  ನ್ನು ಸಾಯಿ ಭಕ್ತರು ನೋಡಬಹುದಾಗಿದೆ. 

ಶ್ರೀ ಸಾಯಿ ವಿಶಾಲ್ ದಾಸ್ ರವರ ಸಾಯಿ ಭಜನೆಯ ವಿಡಿಯೋಗಳು: 





ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment