Thursday, February 23, 2012

ಸದ್ಭಾವನಾ ಪ್ರತಿಷ್ಠಾನ (ನೋಂದಣಿ), ಬೆಂಗಳೂರು ವತಿಯಿಂದ 15ನೇ  ವಾರ್ಷಿಕೋತ್ಸವದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ  

ಸದ್ಭಾವನಾ ಪ್ರತಿಷ್ಠಾನ (ನೋಂದಣಿ), ರಾಜಾಜಿನಗರ, ಬೆಂಗಳೂರು, ಇದೇ ತಿಂಗಳ 27ನೇ ಫೆಬ್ರವರಿ 2012, ಸೋಮವಾರ ದಂದು ಬೆಂಗಳೂರಿನ ಎ.ಡಿ.ಎ.ರಂಗಮಂದಿರದಲ್ಲಿ ತನ್ನ 15ನೇ  ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. 

ಈ ಸಂದರ್ಭದಲ್ಲಿ "ಧರೆಗಿಳಿದ ದಿವ್ಯಚೇತನಾ-ಶಿರಡಿ ಸಾಯಿಬಾಬಾ" ಎಂಬ ಕನ್ನಡ ನೃತ್ಯರೂಪಕವನ್ನು ಬೆಂಗಳೂರಿನ ಚಾಮರಾಜಪೇಟೆಯ ಪ್ರಸಿದ್ಧ ನಾಟ್ಯಾಂಜನ ತಂಡದವರು ಶ್ರೀಮತಿ.ಆಶಾ ನಂದಕಿಶೋರ್ ರವರ ನಿರ್ದೇಶನದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. 

ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಆಮಂತ್ರಣ ಪತ್ರಿಕೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ: 



ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಸದ್ಭಾವನಾ ಪ್ರತಿಷ್ಠಾನದ ಡಾ.ಕಿರಣ್ ಕುಮಾರ್ ಪ್ರಭೂಜಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಹೆಚ್ಚಿನ ಮಾಹಿತಿಗಾಗಿ ಡಾ.ಕಿರಣ್ ಕುಮಾರ್ ಪ್ರಭೂಜಿಯವರನ್ನು ದೂರವಾಣಿ ಸಂಖ್ಯೆ: +91 97412 25966  ಯಲ್ಲಿ ಸಂಪರ್ಕಿಸಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment