Saturday, February 11, 2012

ಕನ್ನಡದ ಪ್ರಪ್ರಥಮ ಸಾಯಿ ಸಚ್ಚರಿತ್ರೆಯ 3ನೇ ಆವೃತ್ತಿಯ ಬಿಡುಗಡೆ  - ಕೃಪೆ: ಸಾಯಿಅಮೃತಧಾರಾ.ಕಾಂ 



ಕನ್ನಡದ ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ! ಮರಾಠಿ ಶ್ರೀ ಸಾಯಿ ಸಚ್ಚರಿತೆಯ ಪ್ರಪ್ರಥಮ ಕನ್ನಡ ಆನುವಾದವಾದ "ಶ್ರೀ ಸಾಯಿನಾಥ ಚರಿತಾಮೃತ" ದ  3ನೇ ಆವೃತ್ತಿಯ ಬಿಡುಗಡೆ ಸಮಾರಂಭ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆಯಿತು. 

ಈ ಉದ್ಗ್ರಂಥದ ಮೊದಲನೆಯ ಆವೃತ್ತಿಯನ್ನು 1966 ನೇ ಇಸವಿಯಲ್ಲಿ ಗ್ರಂಥದ ಅನುವಾದಕರಾದ ದಿವಂಗತ ಶ್ರೀ.ಶ್ರೀಪಾದರಾವ್  ಜಮಖಂಡಿಯವರು ಬಿಡುಗಡೆ ಮಾಡಿರುತ್ತಾರೆ.  

ಈ ಮಹಾನ್ ಗ್ರಂಥವು ಶಿರಡಿ ಸಾಯಿಬಾಬಾ ಸಂಸ್ಥಾನದವರು ಹೊರತಂದಿರುವ "ಶ್ರೀ ಸಾಯಿ ಸಚ್ಚರಿತ್ರೆ" ಗಿಂತಲೂ ಎರಡು ವರ್ಷಗಳ ಮುಂಚೆಯೇ ಬಿಡುಗಡೆಯಾಗಿರುತ್ತದೆ ಎಂಬ ವಿಷಯ ಇಲ್ಲಿ ಉಲ್ಲೇಖಾರ್ಹ.

ಈ ಗ್ರಂಥವನ್ನು ಖರೀದಿಸಲು ಇಚ್ಚಿಸುವ ಸಾಯಿಭಕ್ತರು ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ: 

ಶ್ರೀ.ಸಾಯಿ ಸಾಹಿತ್ಯ ಸುಧಾ, 
ಪತ್ರಕರ್ತನಗರ, 
ಹುಬ್ಬಳ್ಳಿ - 580 032, 
ಕರ್ನಾಟಕ, ಭಾರತ, 
ದೂರವಾಣಿ ಸಂಖ್ಯೆಗಳು: 0836-2374072 / +91 81054 59504 / +91 81054 59508

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment