Tuesday, August 3, 2010

ಚಿತ್ತೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ವಿಶ್ವಸಾಯಿ ಚಾರಿಟಬಲ್ ಟ್ರಸ್ಟ್ (ರಿ), ಕಟ್ಟಮಂಚಿ, ಚಿತ್ತೂರು, ಆಂಧ್ರಪ್ರದೇಶ - ಕೃಪೆ - ಶ್ರೀ.ನಾರಾಯಣ ರೆಡ್ಡಿ

ದೇವಾಲಯದ ವಿಶೇಷತೆಗಳು:

  • ಈ ದೇವಾಲಯದ ಶಂಕುಸ್ಥಾಪನೆಯನ್ನು ೨೫ ನೇ ಸೆಪ್ಟೆಂಬರ್ ೧೯೯೧ ರಂದು ದಿವಂಗತ ಎಂ.ಚೆನ್ನಾರೆಡ್ಡಿ ಯವರು ನೆರವೇರಿಸಿದರು.
  • ಈ ದೇವಾಲಯವು ೭ ನೇ ಅಕ್ಟೋಬರ್ ೨೦೦೦ ದಂದು ದಿವಂಗತ ಡಾ.ರಾಜಶೇಖರ ರೆಡ್ಡಿಯವರಿಂದ ಉದ್ಘಾಟನೆಗೊಂಡಿತು.
  • ದೇವಾಲಯದ ರಾಜಗೊಪುರದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಗುರುತನ್ನು ಕೆತ್ತಲಾಗಿದ್ದು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ರೀತಿಯ ರಾಜಗೋಪುರವು ಸಾಮಾನ್ಯವಾಗಿ ಬೇರೆ ಯಾವುದೇ ಸಾಯಿಬಾಬಾ ಮಂದಿರದಲ್ಲಿ ನಮಗೆ ಕಾಣುವುದಿಲ್ಲ.
  • ದೇವಾಲಯದ ಸಂಪೂರ್ಣ ಹವಾ ನಿಯಂತ್ರಿತ ಧ್ಯಾನಮಂದಿರವನ್ನು ೭ ನೇ ಅಕ್ಟೋಬರ್ ೨೦೦೬ ರಂದು ದಿವಂಗತ ಡಾ.ರಾಜಶೇಖರ ರೆಡ್ಡಿಯವರು ಉದ್ಘಾಟಿಸಿದರು.
  • ಗುರುಸ್ಥಾನವು ದೇವಾಲಯದ ಎಡಭಾಗದಲ್ಲಿದೆ.
  • ದೇವಾಲಯದ ಸುತ್ತಲೂ ವಿಷ್ಣುವಿನ ದಶಾವತಾರದ ಚಿತ್ರಗಳನ್ನು ಆಕರ್ಷಕವಾಗಿ ಕೆತ್ತಲಾಗಿದೆ.
  • ಸಾಯಿಬಾಬಾ ಮಂದಿರದ ಹೊರಗಡೆ ನಂದಿಯನ್ನು ಶಿರಡಿಯಲ್ಲಿರುವಂತೆ ಪ್ರತಿಷ್ಟಾಪಿಸಲಾಗಿದೆ.
  • ದ್ವಾರಕಾಮಾಯಿಯು ಸಾಯಿಮಂದಿರದ ಎಡಭಾಗದಲ್ಲಿದ್ದು ಇಲ್ಲಿ ಧುನಿಯನ್ನು ಶಿರಡಿಯಿಂದ ತಂದ ಪವಿತ್ರ ಅಗ್ನಿಯಿಂದ ಸ್ಥಾಪಿಸಲಾಗಿದೆ.
ದೇವಾಲಯದ ಹೊರನೋಟ


ಗುರುಸ್ಥಾನ

ಪವಿತ್ರ ಧುನಿ ಮಾ

ಪಲ್ಲಕ್ಕಿ ಉತ್ಸವ


ಉಚಿತ ವೈದ್ಯಕೀಯ ಶಿಬಿರದ ದೃಶ್ಯ


ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ದೃಶ್ಯ

ದತ್ತ ಜಯಂತಿ ಉತ್ಸವದ ಅಂಗವಾಗಿ ಭಿಕ್ಷಾಟನೆ ಕಾರ್ಯಕ್ರಮ

ದೇವಾಲಯದ ಕಾರ್ಯಚಟುವಟಿಕೆಗಳು

ದೇವಾಲಯದ ದೈನಂದಿನ ಕಾರ್ಯಕ್ರಮಗಳು

ಆರತಿ ಸಮಯ

ಕಾಕಡ ಆರತಿ - ಪ್ರತಿದಿನ ಬೆಳಗ್ಗೆ ೬:೦೦ ಘಂಟೆಗೆ
ಛೋಟಾ ಆರತಿ - ಪ್ರತಿದಿನ ಬೆಳಗ್ಗೆ ೮:೦೦ ಘಂಟೆಗೆ
ಮಧ್ಯಾನ್ಹ ಆರತಿ - ಪ್ರತಿದಿನ ಮಧ್ಯಾನ್ಹ ೧೨:೦೦ ಘಂಟೆಗೆ
ಧೂಪಾರತಿ - ಪ್ರತಿದಿನ ಸಂಜೆ ೬:೦೦ ಘಂಟೆಗೆ ಮತ್ತು ಗುರುವಾರದಂದು ೬:೧೫ ಕ್ಕೆ
ಶೇಜಾರತಿ - ಪ್ರತಿದಿನ ರಾತ್ರಿ ೮:೦೦ ಘಂಟೆಗೆ ಮತ್ತು ಗುರುವಾರದಂದು ೯:೦೦ ಘಂಟೆಗೆ

ವಿಶೇಷ ಕಾರ್ಯಕ್ರಮಗಳು

ಪ್ರತಿದಿನ ಬೆಳಗ್ಗೆ ೭:೦೦ ಘಂಟೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಎಲ್ಲಾ ಭಕ್ತರಿಂದ ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪ್ರತಿದಿನ ೭:೩೦ ಕ್ಕೆ ಅಭಿಷೇಕ ಮಾಡಲಾಗುತ್ತದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೧೨೫/- ರುಪಾಯಿಗಳನ್ನು ಮುಂಗಡವಾಗಿ ಕೊಟ್ಟು ರಶೀದಿಯನ್ನು ಪಡೆಯಬಹುದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇಲ್ಲ.

ಧುನಿ ಪೂಜೆಯನ್ನು ಪ್ರತಿದಿನ ಬೆಳಗ್ಗೆ ೮:೦೦ ರಿಂದ ೧೦:೦೦ ಘಂಟೆಯವರೆಗೆ ಮತ್ತು ಸಂಜೆ ೫:೦೦ ದಿಂದ ೭:೦೦ ಘಂಟೆಯವರೆಗೆ ಮಾಡಲಾಗುತ್ತದೆ.

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಪಲ್ಲಕ್ಕಿ ಸೇವೆಯನ್ನು ಸಂಜೆ ೭:೩೦ ರಿಂದ ೮:೩೦ ರ ವರೆಗೆ ನಡೆಸಲಾಗುತ್ತದೆ.

ಪ್ರತಿದಿನ ಚಾಮರ ಸೇವೆಯನ್ನು ನಡೆಸಲಾಗುತ್ತದೆ.

ಪ್ರತಿ ಸೋಮವಾರದಂದು ಮಧ್ಯಾನ್ಹ ೨:೩೦ ರಿಂದ ೪:೩೦ ರ ವರೆಗೆ ಸತ್ಸಂಗವನ್ನು ನಡೆಸಲಾಗುತ್ತದೆ.

ವಿಶೇಷ ಉತ್ಸವ ಮತ್ತು ಹಬ್ಬದ ದಿನಗಳು

  • ಹೊಸ ವರ್ಷದ ಆಚರಣೆ (ಹೂವಿನ ಅಲಂಕಾರ ಮತ್ತು ಭಜನೆ).
  • ಪ್ರತಿ ವರ್ಷದ ಗುರುಪೂರ್ಣಿಮೆ ಮತ್ತು ದತ್ತ ಜಯಂತಿಯಂದು ಬೆಳಗ್ಗೆ ೬:೦೦ ರಿಂದ ಸಂಜೆ ೬:೦೦ ಘಂಟೆಯವರೆಗೆ ಶ್ರೀ ಸಾಯಿ ನಾಮ ಜಪವನ್ನು ಮಾಡಲಾಗುತ್ತದೆ.
  • ಶ್ರೀ ರಾಮನವಮಿ ( ಬೆಳಗ್ಗೆ ಚಂದನದ ಮೆರವಣಿಗೆ ಮತ್ತು ಸಂಜೆ ರಥೋತ್ಸವ)
  • ಗುರುಪೂರ್ಣಿಮೆ ಉತ್ಸವ (೨ ದಿನಗಳ ವಿಶೇಷ ಉತ್ಸವ. ೧೦೮ ದ್ರವ್ಯಗಳಿಂದ ಪೂಜೆಯನ್ನು ವಿಶೇಷವಾಗಿ ಶ್ರೀ.ವಿಶ್ವ ಚೈತನ್ಯ, ಶ್ರೀ. ರಮಾನಂದ ಮಹರ್ಷಿ, ಶ್ರೀ. ಶಿವ ಸಾಯಿಬಾಬಾ ಮತ್ತು ಶ್ರೀ.ರಾಜೇಂದ್ರ ಪ್ರಸಾದ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ನಡೆಸಲಾಗುತ್ತದೆ).
  • ವಿಜಯದಶಮಿ (ಸಾಯಿಬಾಬಾರವರ ಮಹಾಸಮಾಧಿ ಮತ್ತು ವಾರ್ಷಿಕೋತ್ಸವ) - ೯ ದಿನಗಳ ಉತ್ಸವವನ್ನಾಗಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಗರುಡ, ಹಂಸ, ನಂದಿ, ಅಶ್ವ, ಮುಷಿಕ, ತಾಮರ, ಮತ್ಸ್ಯ ಮತ್ತು ಗಜ ಉತ್ಸವಗಳನ್ನು ನಡೆಸಲಾಗುತ್ತದೆ. ಪ್ರತಿದಿನ ಸಂಜೆ ನವದುರ್ಗ ಅಲಂಕಾರ ಸಹಿತ ರಥದಲ್ಲಿ ಸಾಯಿಬಾಬಾರವರ ಸುಂದರ ವಿಗ್ರಹವನ್ನು ಮುಂದಿಟ್ಟು ರಥೋತ್ಸವ ನಡೆಸಲಾಗುತ್ತದೆ. ವಿಜಯದಶಮಿಯಂದು ಲಲಿತ ಸಹಸ್ರನಾಮ, ಕನ್ಯಾಕುಮಾರಿ ಪೂಜೆ, ಸುಮಂಗಲಿ ಪೂಜೆ ಮತ್ತು ಸುವಾಸಿನಿ ಪೂಜೆಯನ್ನು ನಡೆಸಲಾಗುತ್ತದೆ.
  • ದತ್ತ ಜಯಂತಿ - ಮಧುಕರಿ ಅಥವಾ ಭಿಕ್ಷಾಟನೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
  • ಪ್ರತಿ ವರ್ಷದ ನವೆಂಬರ್ ತಿಂಗಳಿನಲ್ಲಿ ಸಾಯಿ ನಾಮ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
  • ಪ್ರತಿ ವರ್ಷದ ಶಿವರಾತ್ರಿಯಂದು ಗಿರಿಜಾ ಕಲ್ಯಾಣವನ್ನು ನಡೆಸಲಾಗುತ್ತದೆ.
  • ಪ್ರತಿ ವರ್ಷ ಶ್ರೀ ವೆಂಕಟೇಶ್ವರ ಕಲ್ಯಾಣೋತ್ಸವವನ್ನು ನಡೆಸಲಾಗುತ್ತದೆ.
  • ಪ್ರತಿ ವರ್ಷದ ೧೫ ನೇ ಅಕ್ಟೋಬರ್ ನಂದು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಹಾಲಿನ ಅಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
  • ವರ್ಷದ ಎಲ್ಲಾ ವಿಶೇಷ ಉತ್ಸವದ ದಿನಗಳಂದು ವಿಶೇಷ ಭಜನೆ ಕಾರ್ಯಕ್ರಮಗಳಿರುತ್ತವೆ. ಆಲ್ಲದೇ, ದೇವಾಲಯಕ್ಕೆ ದರ್ಶನಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದವನ್ನು ನೀಡಲಾಗುತ್ತದೆ.
ದೇವಾಲಯದ ಸಾಮಾಜಿಕ ಕಾರ್ಯಕ್ರಮಗಳು

  • ಪ್ರತಿ ಗುರುವಾರ ಅನ್ನದಾನ ಮತ್ತು ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
  • ಆರು ತಿಂಗಳಿಗೆ ಒಮ್ಮೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ.
  • ಪ್ರತಿ ಆರು ತಿಂಗಳಿಗೆ ಒಮ್ಮೆ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಲಾಗುತ್ತದೆ. ಈ ಶಿಬಿರದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗದ ವೈದ್ಯಕೀಯ ನಿಪುಣರು ಭಾಗವಹಿಸಿ ಉಚಿತ ತಪಾಸಣೆ ಮತ್ತು ಔಷಧಿಯನ್ನು ನೀಡುತ್ತಾರೆ.
  • ಪ್ರತಿ ೩ ತಿಂಗಳಿಗೊಮ್ಮೆ ಬಡವರಿಗೆ ಉಚಿತವಾಗಿ ಸೀರೆಗಳು, ಶಾಲುಗಳು ಮತ್ತು ಹೊದಿಕೆಗಳನ್ನು ನೀಡಲಾಗುತ್ತದೆ.
  • ಪ್ರತಿ ವರ್ಷ ರೋಜ್ ಶಾಲೆಯ ಮಕ್ಕಳಿಗೆ ಕ್ರೀಡೆಗಳನ್ನು ನಡೆಸಿ ಬಹುಮಾನವನ್ನು ವಿತರಿಸಲಾಗುತ್ತದೆ. ಆಲ್ಲದೇ ಈ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಸಲಹೆ ಮತ್ತು ಅನ್ನದಾನ ಕಾರ್ಯಕ್ರಮವನ್ನು ಕೂಡ ನಡೆಸಲಾಗುತ್ತದೆ.
  • ಪ್ರತಿ ಕಾರ್ತಿಕ ಮಾಸದ ಹುಣ್ಣಿಮೆಯಂದು ಶಿವಲಿಂಗಕ್ಕೆ ಲಕ್ಷ ದೀಪೋತ್ಸವವನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮರಳಿನ ಲಿಂಗ, ಹಿಮದ ಲಿಂಗ, ನವಧಾನ್ಯದಿಂದ ಮಾಡಿದ ಲಿಂಗ ಮತ್ತು ಇನ್ನು ಮುಂತಾದ ಅಲಂಕಾರಗಳನ್ನು ಮಾಡಲಾಗುತ್ತದೆ.
  • ಪ್ರತಿ ವರ್ಷದ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮತ್ತು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಚಿತ್ತೂರಿನ ೯ ಸರ್ಕಾರಿ ಶಾಲೆಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಗುತ್ತದೆ.
  • ೩ ತಿಂಗಳಿಗೆ ಒಮ್ಮೆ ದೇವಾಲಯದ ಪ್ರಾಂಗಣದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ಕೈಬರವಣಿಗೆಯ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
  • ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮತ್ತು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ೧೦೧೬/- ರುಪಾಯಿಗಳನ್ನು ನೀಡುವ ಕಾರ್ಯಕ್ರಮವನ್ನು ವರ್ಷಕ್ಕೊಮ್ಮೆ ಹಮ್ಮಿಕೊಳ್ಳಲಾಗುತ್ತದೆ.
  • ಪ್ರತಿ ವರ್ಷದ ೯ ನೇ ಫೆಬ್ರವರಿ ಯಂದು ಮಹಿಳೆಯರಿಗೆ ವಿಶೇಷವಾಗಿ ವೈದ್ಯಕೀಯ ಶಿಬಿರವನ್ನು ನಡೆಸಿ ಉಚಿತ ತಪಾಸಣೆ ಮತ್ತು ಔಷಧಿಯನ್ನು ನೀಡಲಾಗುತ್ತದೆ.
ದೇವಾಲಯದ ಸಂಪರ್ಕದ ವಿವರಗಳು ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ. ಶಿರಡಿ ವಿಶ್ವ ಸಾಯಿ ಚಾರಿಟಬಲ್ ಟ್ರಸ್ಟ್ (ರಿ)
ಕಟ್ಟಮಂಚಿ, ಚಿತ್ತೂರು-೫೧೭ ೦೦೧.
ಆಂಧ್ರಪ್ರದೇಶ.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ. ನಾರಾಯಣ ರೆಡ್ಡಿ - ದೇವಾಲಯದ ಮ್ಯಾನೇಜರ್

ದೂರವಾಣಿ ಸಂಖ್ಯೆ:

೦೯೮೮೫೦ ೩೦೪೦೫

ಮಾರ್ಗಸೂಚಿ:

ಚಿತ್ತೂರು ಮುಖ್ಯ ಬಸ್ ನಿಲ್ಧಾಣದಿಂದ ತಿರುಪತಿಗೆ ಹೋಗುವ ದಾರಿಯಲ್ಲಿ ೫ ನಿಮಿಷ ನಡೆದರೆ ಸಾಯಿಮಂದಿರ ಸಿಗುತ್ತದೆ.

No comments:

Post a Comment