Sunday, August 1, 2010

ಹುಬ್ಬಳ್ಳಿಯ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ (ರಿ), ಕೋರ್ಟ್ ಹತ್ತಿರ, ಕ್ಲಬ್ ರಸ್ತೆ, ಹುಬ್ಬಳ್ಳಿ - ಕೃಪೆ - ಶ್ರೀ. ಅಶೋಕ್ ಕೆ.ಕವ್ಲೆಕರ್

ದೇವಾಲಯದ ವಿಶೇಷತೆಗಳು



  • ದೇವಾಲಯದ ಭೂಮಿಪೂಜೆಯನ್ನು ೯ ನೇ ಏಪ್ರಿಲ್ ೧೯೯೫ ರಂದು ನೆರವೇರಿಸಲಾಯಿತು.


  • ದೇವಾಲಯವು ೨೯ ನೇ ಏಪ್ರಿಲ್ ೧೯೯೮ ರಂದು ಪರಮ ಪೂಜ್ಯ ಶ್ರೀ. ಸ್ವಾಮಿ ಪ್ರದ್ಯೋದಾನಂದಜಿ ಯವರಿಂದ ಉದ್ಘಾಟನೆಗೊಂಡಿತು. ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ನ ಶ್ರೀ.ಕೆ.ವಿ.ರಮಣಿ, ಅಖಂಡ ಸಾಯಿ ನಾಮ ಸಪ್ತಾಹ ಟ್ರಸ್ಟ್ ನ ಶ್ರೀ. ವಿ.ಎಸ್.ಕುಬೇರ ಚೆನ್ನೈ ನಗರದ ಸಾಯಿಮಹಾಭಕ್ತ ದಿವಂಗತ ಶ್ರೀ.ರಾಧಾಕೃಷ್ಣ ಅಯ್ಯರ್, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಶ್ರೀ.ವಿಜಯ್ ಸಂಕೇಶ್ವರ್ ರವರು ಕೂಡ ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.


  • ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ.


  • ಸಾಯಿಮಂದಿರದ ಆವರಣದ ಹೊರಗಡೆ ನಂದಿಯ ವಿಗ್ರಹವನ್ನು ಶಿರಡಿಯಲ್ಲಿರುವಂತೆ ಸ್ಥಾಪಿಸಲಾಗಿದೆ.


  • ದೇವಾಲಯದ ಬಲಭಾಗದಲ್ಲಿ ಗಣೇಶನ ಮಂದಿರವಿದೆ.


  • ಗಣೇಶ ಮಂದಿರದ ಪಕ್ಕದಲ್ಲಿ ದತ್ತಾತ್ರೇಯನ ಮಂದಿರವಿದೆ. ದತ್ತಾತ್ರೇಯ ವಿಗ್ರಹದ ಹಿಂಭಾಗದಲ್ಲಿ ಬೃಹತ್ ಔದುಂಬರ ವೃಕ್ಷವಿದೆ.


  • ದ್ವಾರಕಾಮಾಯಿಯು ದೇವಾಲಯದ ಬಲಭಾಗದಲ್ಲಿದೆ. ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವನ್ನು ಇಡಲಾಗಿದೆ. ಶಿರಡಿಯಿಂದ ತಂದ ಪವಿತ್ರ ಅಗ್ನಿಯಿಂದ ಧುನಿಯನ್ನು ದ್ವಾರಕಾಮಾಯಿಯ ಒಳಗಡೆ ಸ್ಥಾಪಿಸಲಾಗಿದೆ.


  • ದ್ವಾರಕಾಮಾಯಿಯ ಪಕ್ಕದಲ್ಲಿ ಒಂದು ದೊಡ್ಡ ಸಭಾಂಗಣವಿದೆ. ಈ ಸಭಾಂಗಣವನ್ನು ಪ್ರತಿ ಗುರುವಾರದ ಮಹಾಪ್ರಸಾದ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತದೆ.


  • ಗುರುಸ್ಥಾನವನ್ನು ಸಾಯಿ ಮಂದಿರದ ದ್ವಾರದ ಆವರಣದಲ್ಲಿ ಬಲಭಾಗದ ಕೊನೆಯಲ್ಲಿ ಸ್ಥಾಪಿಸಲಾಗಿದೆ. ಗುರುಸ್ಥಾನದ ಹೊರಗಡೆ ಒಂದು ಬೃಹತ್ ಬೇವಿನ ಮರವನ್ನು ಸ್ಥಾಪಿಸಲಾಗಿದೆ.


  • ದೇವಾಲಯದ ಆವರಣದ ಬಲಭಾಗದಲ್ಲಿ ಶಿವ ಮತ್ತು ನವಗ್ರಹ ದೇವಾಲಯವಿದೆ.


  • ಸಾಯಿ ಸಚ್ಚರಿತೆ ಪಾರಾಯಣವನ್ನು ಪ್ರತಿ ಉತ್ಸವ ಮತ್ತು ಹಬ್ಬದ ಸಮಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ.


  • ಪವಿತ್ರ ಧ್ವಜಗಳ ಮೆರವಣಿಗೆಯನ್ನು ಪ್ರತಿ ಉತ್ಸವ ಮತ್ತು ಹಬ್ಬದ ಸಮಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ.


  • ಪ್ರತಿ ಗುರುವಾರದಂದು ಬೆಳ್ಳಿಯ ಸಾಯಿಬಾಬಾ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಇರಿಸಿ ಪಲ್ಲಕ್ಕಿಯನ್ನು ದೇವಾಲಯದ ಆವರಣದ ಸುತ್ತಾ ಪ್ರದಕ್ಷಿಣೆ ತೆಗೆದುಕೊಂಡು ಹೋಗಲಾಗುತ್ತದೆ. 


  • ತಿಂಗಳ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯ ಕಾರ್ಯಕ್ರಮವಿರುತ್ತದೆ. 

ಸಾಯಿಬಾಬಾರವರ ವಿಗ್ರಹ

ದ್ವಾರಕಾಮಾಯಿ ಮತ್ತು ಪವಿತ್ರ ಧುನಿ ಮಾ

ದ್ವಾರಕಾಮಾಯಿಯಲ್ಲಿರುವ ಸಾಯಿಯವರ ಚಿತ್ರಪಟ

ಉತ್ಸವದ ದಿನಗಳಲ್ಲಿ ಧ್ವಜದ ಮೆರವಣಿಗೆಯ ದೃಶ್ಯ

ಸಾಯಿ ಸಚ್ಚರಿತೆ ಪಾರಾಯಣ

ಸತ್ಯನಾರಾಯಣ ಪೂಜೆಯ ದೃಶ್ಯ

ದೇವಾಲಯದ ಕಾರ್ಯಚಟುವಟಿಕೆಗಳು  

ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ

ಕಾಕಡ ಆರತಿ - ಬೆಳಗ್ಗೆ ೬:೧೫ ಕ್ಕೆ
ಮಧ್ಯಾನ್ಹ ಆರತಿ - ಮಧ್ಯಾನ್ಹ ೧೨:೩೦ ಕ್ಕೆ
ಧೂಪಾರತಿ - ಸಂಜೆ ೬:೩೦ ಕ್ಕೆ
ಶೇಜಾರತಿ - ರಾತ್ರಿ ೧೦:೦೦ ಘಂಟೆಗೆ

ವಿಶೇಷ ಕಾರ್ಯಕ್ರಮಗಳು

೧. ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ರಾಮನಗರ, ಗದಗ ರಸ್ತೆ, ಹುಬ್ಬಳ್ಳಿಯ ಬಳಿ ಶಾಲೆಯೊಂದನ್ನು ಸ್ಥಾಪಿಸಲಾಗಿದೆ.
೨. ಪ್ರತಿ ವಾರದ ಬುಧವಾರ ಮತ್ತು ಭಾನುವಾರ ಬಡ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧ ವಿತರಣೆ.
೩. ಪ್ರತಿ ಗುರುವಾರದಂದು ಬಂದ ಎಲ್ಲಾ ಸಾಯಿಭಕ್ತರಿಗೆ ಮಹಾಪ್ರಸಾದ ವಿತರಣೆ.
೪. ಹುಬ್ಬಳ್ಳಿಯ ಕೊರ್ವಿನಕೊಪ್ಪ ದಲ್ಲಿ ಗೋಶಾಲೆಯ ಸ್ಥಾಪನೆ.
೫. ಹುಬ್ಬಳ್ಳಿಯ ಬಳಿ ಅನಾಥಾಶ್ರಮ ಮತ್ತು ಬೋರ್ಡಿಂಗ್ ಶಾಲೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ವಿಶೇಷ ಉತ್ಸವದ ದಿನಗಳು

೧. ಪ್ರತಿ ವರ್ಷದ ೨೯ ನೇ ಏಪ್ರಿಲ್ ರಂದು ದೇವಾಲಯದ ವಾರ್ಷಿಕೋತ್ಸವ.
೨. ಶ್ರೀ ರಾಮನವಮಿ.
೩. ಗುರು ಪೂರ್ಣಿಮೆ.
೪. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).

ದೇವಾಲಯದ ಸಂಪರ್ಕದ ವಿವರಗಳು ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ (ರಿ),
ಕೋರ್ಟ್ ಹತ್ತಿರ, ಕ್ಲಬ್ ರಸ್ತೆ, ಹುಬ್ಬಳ್ಳಿ-೫೮೦ ೦೨೯.

ಸಂಪರ್ಕಿಸಬೇಕಾದ ವ್ಯಕ್ತಿ :

ಶ್ರೀ. ಅಶೋಕ್ ಕೆ. ಕವ್ಲೆಕರ್, ಚೇರ್ಮೆನ್, ಶ್ರೀ. ಶಿರಡಿ ಸಾಯಿ ಸದ್ಭಕ್ತ ಮಂಡಳಿ (ರಿ)

ದೂರವಾಣಿ ಸಂಖ್ಯೆಗಳು:

೯೪೪೮೨ ೭೦೩೦೨ / ೮೩೬-೨೩೬೨೩೭೮ / ೮೩೬-೨೩೦೪೬೬೧

ಮಾರ್ಗಸೂಚಿ:

ಕೋರ್ಟ್ ವೃತ್ತದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಕೋರ್ಟ್ ನ ಪಕ್ಕದಲ್ಲಿ ಇದೆ.

No comments:

Post a Comment