Monday, August 25, 2014

ಆಸ್ಟ್ರೇಲಿಯಾ ದೇಶದ ವಿವಿಧ ಕಡೆಗಳಲ್ಲಿ ಪ್ರತಿಷ್ಟಾಪನೆಗೆಂದು ಹೋಗುತ್ತಿರುವ ಶ್ರೀ ಸಾಯಿಬಾಬಾರವರ ಅಮೃತ ಶಿಲೆಯ ಮೂರ್ತಿಗಳಿಗೆ ಸಾಯಿಬಾಬಾ ಸಂಸ್ಥಾನದ ವತಿಯಿಂದ ವಿಶೇಷ ಪೂಜೆ - ಕೃಪೆ: ಸಾಯಿಅಮೃತಧಾರಾ.ಕಾಂ

ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಎಲ್ಲಾ ಕಡೆಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತುತ್ತಿವೆ. ಅಂತೆಯೇ ಇದೇ ತಿಂಗಳ 24ನೇ ಆಗಸ್ಟ್  2014, ಭಾನುವಾರದಂದು ಆಸ್ಟ್ರೇಲಿಯಾ ದೇಶದ ಪರ್ತ್ ಮತ್ತು ಕ್ಯಾನ್ ಬೆರಾದ ವಿವಿಧ ಕಡೆಗಳಲ್ಲಿ ಪ್ರತಿಷ್ಟಾಪನೆಗೆಂದು ಹೋಗುತ್ತಿರುವ ಶ್ರೀ ಸಾಯಿಬಾಬಾರವರ ಅಮೃತ ಶಿಲೆಯ ಮೂರ್ತಿಗಳಿಗೆ ಸಾಯಿಬಾಬಾ ಸಂಸ್ಥಾನದ ವತಿಯಿಂದ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. 

ದಿನ ಕಳೆದಂತೆ ಶ್ರೀ ಸಾಯಿಬಾಬಾರವರು ಪ್ರಪಂಚದ ಎಲ್ಲಾ ಕಡೆಗಳಲ್ಲಿ ಬಹಳವೇ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ ಎಂಬುದು ತಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾಗಿ ಅವರ ಮಂದಿರಗಳು ವಿಶ್ವದ ಎಲ್ಲೆಡೆ ತಲೆಯೆತ್ತುತ್ತಿವೆ. ಪ್ರಪಂಚದ ಎಲ್ಲಾ ಭಾಗಗಳ ಭಕ್ತರೂ ತಮ್ಮ ತಮ್ಮ ದೇಶಗಳಲ್ಲಿ ಪ್ರತಿಷ್ಟಾಪನೆ ಮಾಡುವುದಕ್ಕೆ ಮುಂಚಿತವಾಗಿ ಭಾರತದ ಜೈಪುರದಿಂದ ವಿಗ್ರಹವನ್ನು ಶಿರಡಿಗೆ ತಂದು ವಿಧಿವತ್ತಾಗಿ ವಿಗ್ರಹಕ್ಕೆ ಪೂಜೆಯನ್ನು ಮಾಡಿಸಿಕೊಂಡು ನಂತರ ಪ್ರತಿಷ್ಠಾಪನೆಗೆ ತೆಗೆದುಕೊಂಡು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ತಿರುಪತಿಯ ಡಾ.ರಘುನಾಥ ರೆಡ್ಡಿಯವರು ಪರ್ತ್ ನ ಸಾಯಿ ಮಂದಿರದ ಅಧ್ಯಕ್ಷರಾದ ಶ್ರೀ.ಸಾಯಿ ಕೃಷ್ಣ ತುಳಸಿಯೊಂದಿಗೆ  ಹಾಗೂ ಕ್ಯಾನ್ ಬೆರಾದ ಸಾಯಿ ಮಂದಿರದ ಅಧ್ಯಕ್ಷೆ ಶ್ರೀಮತಿ.ಕೆ.ಅನಿತಾರವರು ಜೈಪುರದಿಂದ ವಿಗ್ರಹಗಳೊಂದಿಗೆ ಬಂದು ಶಿರಡಿಯಲ್ಲಿ ಪೂಜೆಯನ್ನು ಮಾಡಿಸಿದರು. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ನ ಆಕ್ಲೆಂಡ್ ಸಾಯಿ ಮಂದಿರದ ಶ್ರೀ.ಭಾಸ್ಕರ್ ರೆಡ್ಡಿಯವರು ಕೂಡ ಉಪಸ್ಥಿತರಿದ್ದರು. ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ಪರವಾಗಿ ಗಣ್ಯರನ್ನು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಸ್ವಾಗತಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಭಾಸ್ಕರ ರೆಡ್ಡಿಯವರು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಸಾಯಿ ಮಂದಿರದ ಉದ್ಘಾಟನೆಯಾಯಿತು. ಶಿರಡಿಯಂತೆ ಅಲ್ಲಿ ಕೂಡ ನಿಯಮಿತವಾಗಿ ಪೂಜೆ, ಆರತಿಗಳು ಪ್ರತಿನಿತ್ಯ ನಡೆಯುತ್ತಿದ್ದು ಸಾವಿರಾರು ಮಂದಿ ಭಕ್ತರನ್ನು ಆಕರ್ಷಿಸುತ್ತಿದೆ. ಮಂದಿರದಲ್ಲಿ ಅನ್ನದಾನ, ರಕ್ತದಾನ ಶಿಬಿರಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದ ಪರ್ತ್  ಮತ್ತು ಕ್ಯಾನ್ ಬೆರಾದಲ್ಲಿ ತಲೆ ಎತ್ತುತ್ತಿರುವ ಮಂದಿರಗಳು ಸಹ ಸಾವಿರಾರು ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂದೇಹವಿಲ್ಲ  ಎಂದು ನುಡಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ. ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment