Saturday, May 31, 2014

ಗುಜರಾತಿ ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕಿ ಹಾಗೂ ಅನನ್ಯ ಸಾಯಿ ಭಕ್ತೆ - ಶ್ರೀಮತಿ.ಹೀನಾ ಮೆಹ್ತಾ -ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀಮತಿ.ಹೀನಾ ಮೆಹ್ತಾರವರು ಗುಜರಾತಿ ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕಿ ಹಾಗೂ ಅನನ್ಯ ಸಾಯಿ ಭಕ್ತೆ. ಇವರು  ಶ್ರೀ  ಡಾ.ರವೀಂದ್ರನಾಥ್ ಕಾಕಾರ್ಯ ರವರ ಸಾಯಿ ಸಚ್ಚರಿತ್ರೆ (ಓವಿಯಿಂದ ಓವಿಗೆ) ಯನ್ನು ಹಿಂದಿ ಭಾಷೆಯಿಂದ  ಗುಜರಾತಿ ಭಾಷೆಗೆ ತರ್ಜುಮೆ ಮಾಡಿದ್ದಾರೆ. 

ಇವರು 16ನೇ ಮೇ 1956 ರಂದು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಜನಿಸಿದರು. ಇವರು ಹೈದರಾಬಾದ್ ನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿಯನ್ನು ಗಳಿಸಿರುತಾರೆ. 

ಇವರು  ಶ್ರೀ  ಡಾ.ರವೀಂದ್ರನಾಥ್ ಕಾಕಾರ್ಯ ರವರ ಸಾಯಿ ಸಚ್ಚರಿತ್ರೆ (ಓವಿಯಿಂದ ಓವಿಗೆ) ಯನ್ನು ಹಿಂದಿ ಭಾಷೆಯಿಂದ  ಗುಜರಾತಿ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಇವರು ತಮ್ಮ ಪತಿಯಾದ ಶ್ರೀ.ವಿಜಯ್ ಮೆಹ್ತಾರವರ ಜೊತೆಯಲ್ಲಿ ಸೇರಿಕೊಂಡು ಪ್ರತಿ ವಾರವೂ  ಬೆಂಗಳೂರಿನ ವಿವಿಧ  ಸಾಯಿ ಭಕ್ತರ ಮನೆಗಳಲ್ಲಿ "ಸಾಯಿ ಭಕ್ತಿ ಪಾಠ್" ಪಠಣವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ, ಸಾಯಿ ಭಕ್ತಿ ಪಾಠ್ ಪುಸ್ತಕವನ್ನು ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಮುದ್ರಿಸಿ ಎಲ್ಲಾ ಭಕ್ತರಿಗೂ ಉಚಿತವಾಗಿ ಹಂಚುತ್ತಿದ್ದಾರೆ. ಅಷ್ಟೆ ಅಲ್ಲದೇ ಇವರು ವರ್ಷದಲ್ಲಿ 2-3 ಬಾರಿ ಭಕ್ತರನ್ನು ಶಿರಡಿಗೆ ಕರೆದುಕೊಂಡು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. 

ಇವರು ಶ್ರೀ.ವಿಜಯ್ ಮೆಹ್ತಾರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀ.ಜಯ್  ಮೆಹ್ತಾ ಮತ್ತು ಶ್ರೀ.ಅಂಕಿತ್ ವಿ.ಮೆಹ್ತಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 

ಪ್ರಸ್ತುತ ತಮ್ಮ ಪತಿ ಹಾಗೂ ದ್ವಿತೀಯ ಪುತ್ರನೊಂದಿಗೆ  ಬೆಂಗಳೂರಿನಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀಮತಿ.ಹೀನಾ ಮೆಹ್ತಾರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:

ಸಂಪರ್ಕದ ವಿವರಗಳು: 

ಶ್ರೀಮತಿ.ಹೀನಾ ಮೆಹ್ತಾ
ಶ್ರೀ.ವಿಜಯ್ ಮೆಹ್ತಾ
ಸಂಖ್ಯೆ:886/17,1ನೇ ಮಹಡಿ,  ಜೆ.ಜೆ.ವಿಲ್ಲಾ,
18ನೇ ಮುಖ್ಯರಸ್ತೆ, 5ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು-560 010. 
ಕರ್ನಾಟಕ, ಭಾರತ.
ದೂರವಾಣಿ ಸಂಖ್ಯೆಗಳು:+91 94483 74588/+91 89511 01436
ಮಿಂಚಂಚೆ:saivacblr@vacpenumatic.co.in

(ಆಧಾರ: ಶ್ರೀಮತಿ.ಹೀನಾ ಮೆಹ್ತಾರವರೊಂದಿಗೆ 11ನೇ ಮೇ 2014 ರಂದು ನಡೆಸಿದ ನೇರ ಸಂದರ್ಶನ) 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment