Thursday, May 8, 2014

ದಿವಂಗತ ಶ್ರೀ.ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆಯ ಆಧುನಿಕ ಆಂಗ್ಲ ನಿರೂಪಣೆಯನ್ನು ಹೊಂದಿರುವ ಪುಸ್ತಕದ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ದಿವಂಗತ ಶ್ರೀ.ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆಯ ಆಧುನಿಕ ಆಂಗ್ಲ ನಿರೂಪಣೆಯನ್ನು ಹೊಂದಿರುವ ಪುಸ್ತಕವನ್ನು ಇದೇ ತಿಂಗಳ 8ನೇ ಮೇ 2014, ಗುರುವಾರದಂದು ಶಿರಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.  ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ಹಾಗೂ ಆಧುನಿಕ ಆಂಗ್ಲ ನಿರೂಪಣೆಯನ್ನು ಮಾಡಿರುವ ಪುಸ್ತಕದ ಲೇಖಕಿ ಅಮೇರಿಕಾದ ಶ್ರೀಮತಿ.ಮೋನಿಕ ಪೆನುಕೊಂಡರವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment