Saturday, June 1, 2013

ಭಾರತದ ರಾಷ್ಟ್ರಪತಿ ಶ್ರೀ.ಪ್ರಣಬ್ ಮುಖರ್ಜಿ ಶಿರಡಿ ಭೇಟಿ- ಕೃಪೆ:ಸಾಯಿಅಮೃತಧಾರಾ.ಕಾಂ

ಭಾರತದ ರಾಷ್ಟ್ರಪತಿಗಳಾದ ಶ್ರೀ.ಪ್ರಣಬ್ ಮುಖರ್ಜಿಯವರು ಇದೇ ತಿಂಗಳ  1ನೇ ಜೂನ್ 2013, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ.ಶಂಕರ ನಾರಾಯಣ, ಪಂಜಾಬ್ ನ ರಾಜ್ಯಪಾಲರಾದ ಶ್ರೀ.ಶಿವರಾಜ್ ಪಾಟೀಲ್ ಚಾಕೂರ್ಕರ್, ಸಂಸತ್ ಸದಸ್ಯ ಶ್ರೀ.ಬಾವು ಸಾಹೇಬ್ ವಾಕ್ಚುರೆ, ಮಹಾರಾಷ್ಟ್ರ ಸರ್ಕಾರದ ಬುಡಕಟ್ಟು ಜನಾಂಗ ಅಭಿವೃದ್ಧಿ ಸಚಿವರಾದ ಶ್ರೀ.ಬಾಬಾನ್ ರಾವ್ ಪಚ್ಪುಟೆ, ಕಂದಾಯ ಮತ್ತು ಉಪ್ಪು ಭೂಮಿ ಸಚಿವರಾದ ಬಾಳಾಸಾಹೇಬ್ ತೋರಟ್, ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖ್ಹೆ ಪಾಟೀಲ್, ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿ, ಅಹಮದ್ ನಗರದ ಕಲೆಕ್ಟರ್ ಹಾಗೂ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಡಾಕ್ಟರ್ ಸಂಜೀವ್ ಕುಮಾರ್ ದಯಾಳ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರುಗಳು ಕೂಡ ಉಪಸ್ಥಿತರಿದ್ದರು. 


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಭಾರತದ ರಾಷ್ಟ್ರಪತಿಗಳಾದ ಶ್ರೀ.ಪ್ರಣಬ್ ಮುಖರ್ಜಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ.ಶಂಕರ ನಾರಾಯಣ, ಪಂಜಾಬ್ ನ ರಾಜ್ಯಪಾಲರಾದ ಶ್ರೀ.ಶಿವರಾಜ್ ಪಾಟೀಲ್ ಚಾಕೂರ್ಕರ್, ಸಂಸತ್ ಸದಸ್ಯ ಶ್ರೀ.ಬಾವು ಸಾಹೇಬ್ ವಾಕ್ಚುರೆ, ಮಹಾರಾಷ್ಟ್ರ ಸರ್ಕಾರದ ಬುಡಕಟ್ಟು ಜನಾಂಗ ಅಭಿವೃದ್ಧಿ ಸಚಿವರಾದ ಶ್ರೀ.ಬಾಬಾನ್ ರಾವ್ ಪಚ್ಪುಟೆ, ಕಂದಾಯ ಮತ್ತು ಉಪ್ಪು ಭೂಮಿ ಸಚಿವರಾದ ಬಾಳಾಸಾಹೇಬ್ ತೋರಟ್, ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖ್ಹೆ ಪಾಟೀಲ್, ಅಹಮದ್ ನಗರದ ಕಲೆಕ್ಟರ್ ಹಾಗೂ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಡಾಕ್ಟರ್ ಸಂಜೀವ್ ಕುಮಾರ್ ದಯಾಳ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರುಗಳು ಕೂಡ ಉಪಸ್ಥಿತರಿದ್ದರು. 


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಾತನಾಡಿದ ರಾಷ್ಟ್ರಪತಿ ಶ್ರೀ.ಪ್ರಣಬ್ ಮುಖರ್ಜಿಯವರು ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಮಾಡಿ ಅವರ ಪಾದಕಮಲಗಳಿಗೆ ಪ್ರಣಾಮಗಳನ್ನು ಸಲ್ಲಿಸುವ ಅವಕಾಶ ತಮಗೆ ದೊರಕಿದ್ದು ತಮ್ಮ ಸೌಭಾಗ್ಯವೆಂದು ಬಣ್ಣಿಸಿದರು. 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment