Thursday, June 25, 2015

ಹೈದರಾಬಾದ್ ನ ಸಾಯಿ ಭಕ್ತರಿಂದ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 12.5 ಲಕ್ಷದ ಅಗ್ನಿಶಾಮಕ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಹೈದರಾಬಾದ್ ನ ಸಾಯಿ ಭಕ್ತರಾದ ಶ್ರೀ.ಬಿ.ಪಿ.ಎಸ್.ರೆಡ್ಡಿಯವರು ಇದೇ ತಿಂಗಳ 25ನೇ ಜೂನ್ 2015, ಗುರುವಾರ ದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 12.5 ಲಕ್ಷ ಬೆಲೆಬಾಳುವ ಅಗ್ನಿಶಾಮಕ ವಾಹನವನ್ನು ಕಾಣಿಕೆಯಾಗಿ ನೀಡಿದರು. ಅಗ್ನಿಶಾಮಕ ವಾಹನದ ಪೂಜೆಯನ್ನು ಮಹಾರಾಷ್ಟ್ರ ಸದನದ ವಿರೋಧ ಪಕ್ಷದ ನಾಯಕರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ರವರು ನೆರವೇರಿಸಿದರು. ಆ ಸಂದರ್ಭದಲ್ಲಿ ದಾನಿಗಳಾದ ಶ್ರೀ.ಬಿ.ಪಿ.ಎಸ್.ರೆಡ್ಡಿ, ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment