Thursday, March 19, 2015

ಅಕ್ಕಿ, ಸಾಸಿವೆ ಕಾಳು ಹಾಗೂ ಎಳ್ಳಿನಿಂದ ರಚಿಸಲಾದ ಶ್ರೀ ಸಾಯಿ ಲೀಲಾಮೃತ ಗ್ರಂಥದ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಔರಂಗಾಬಾದ್ ನ ಸಾಯಿ  ಭಕ್ತರೂ ಹಾಗೂ ಲೇಖಕರಾದ ಶ್ರೀ.ಗಜೇಂದ್ರ ವದೋನ್ಕರ್ ರವರು ಅಕ್ಕಿ, ಸಾಸಿವೆ ಕಾಳು ಹಾಗೂ ಎಳ್ಳಿನಿಂದ ರಚಿಸಿದ ಶ್ರೀ ಸಾಯಿ ಲೀಲಾಮೃತ ಗ್ರಂಥವನ್ನು ಇದೇ ತಿಂಗಳ 19ನೇ ಮಾರ್ಚ್ 2015, ಗುರುವಾರ ದಂದು ಲೋಕಾರ್ಪಣೆ ಮಾಡಲಾಯಿತು. ಲೇಖಕರು  ಗ್ರಂಥವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ ರಾಜೇಂದ್ರ ಜಾಧವ್ ರವರಿಗೆ ಸಮರ್ಪಣೆ ಮಾಡಿದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಶ್ರೀ.ವಿಜಯ್ ಕೋತೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸಾಯಿಬಾಬಾ ಸಂಸ್ಥಾನದ ಮುಖ್ಯ ಲೆಕ್ಕಾಧಿಕಾರಿಗಳು ಸಹ ಉಪಸ್ಥಿತರಿದ್ದರು. 



ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 


No comments:

Post a Comment