Saturday, February 28, 2015

ಮಹಾರಾಷ್ಟ್ರದ ರಾಜ್ಯಪಾಲ ಶ್ರೀ.ಸಿ.ವಿದ್ಯಾಸಾಗರ ರಾವ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ಸಿ.ವಿದ್ಯಾಸಾಗರ ರಾವ್ ರವರು ಇದೇ ತಿಂಗಳ 28ನೇ ಫೆಬ್ರವರಿ 2015, ಶನಿವಾರದಂದು ತಮ್ಮ ಧರ್ಮಪತ್ನಿಯ ಜೊತೆಯಲ್ಲಿ ಶಿರಡಿಗೆ ಭೇಟಿ ನೀಡಿ ಶ್ರೀ.ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ವಿಧಾನಸಭೆಯ ವಿರೋಧಪಕ್ಷದ ನಾಯಕರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್, ಅಹಮದ್ ನಗರ ಜಿಲ್ಲಾ ಕಲೆಕ್ಟರ್ ಹಾಗೂ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಶ್ರೀ.ಅನಿಲ್ ಕಾವಡೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರುಗಳು ಕೂಡ ಉಪಸ್ಥಿತರಿದ್ದರು. 


ದರ್ಶನದ ನಂತರ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ರಾಜ್ಯಪಾಲ ಶ್ರೀ.ಸಿ.ವಿದ್ಯಾಸಾಗರ ರಾವ್ ರವರು "ಇಂದು ನಾನು ಶ್ರೀ ಸಾಯಿಬಾಬಾ, ಸಮಾಧಿ ಮಂದಿರದ ಸಂಕೀರ್ಣ ಮತ್ತು ಅತಿಥಿ ಗೃಹದ ದರ್ಶನವನ್ನು ಮಾಡುವ ಸೌಭಾಗ್ಯವನ್ನು ಹೊಂದಿದ್ದೆ. ಸಂಸ್ಥಾನದ ಪರಿಸರವನ್ನು ಕೊಳೆಯಿಲ್ಲದೆ ಶುದ್ಧವಾಗಿ ಹಾಗೂ ಸುಂದರವಾಗಿ ಇರಿಸಿರುವ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯವು ಪ್ರಶಂಸನೀಯ" ಎಂದು ಮುಕ್ತಕಂಠದಿಂದ ಹೊಗಳಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment