Thursday, December 27, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ದತ್ತ ಜಯಂತಿಯ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ದತ್ತ ಜಯಂತಿ ಉತ್ಸವದ ಅಂಗವಾಗಿ  27ನೇ ಡಿಸೆಂಬರ್ 2012, ಗುರುವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆ ಹಾಗೂ ಅವರ ಧರ್ಮಪತ್ನಿಯವರು ಉಯ್ಯಾಲೆಯಲ್ಲಿ ದತ್ತಾತ್ರೇಯರನ್ನು ಇಟ್ಟು ತೂಗುವ  ಮೂಲಕ ದತ್ತ ಜಯಂತಿ ಉತ್ಸವವನ್ನು ಉದ್ಘಾಟಿಸಿದರು.



ದತ್ತ ಜಯಂತಿ ಉತ್ಸವದ ಅಂಗವಾಗಿ  27ನೇ ಡಿಸೆಂಬರ್ 2012, ಗುರುವಾರದಂದು  ದೆಹಲಿಯ ಸಾಯಿ ಭಕ್ತರಾದ ಶ್ರೀ.ರಾಜೇಂದ್ರ ದಾಂಗ್ ರವರು ನೀಡಿದ ಕಾಣಿಕೆಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರ ಹಾಗೂ ಪ್ರಾಂಗಣವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.



 ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment