Monday, April 30, 2012

ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), ಗಂಜಾಂ, ಒರಿಸ್ಸಾ ಭೂಮಿಪೂಜಾ ಸಮಾರಂಭದ ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಒರಿಸ್ಸಾರಾಜ್ಯದ ಗಂಜಾಂ ಜಿಲ್ಲೆಯ ಬಡುವಾದಲ್ಲಿರುವ ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮವು ತಮ್ಮ ಆಶ್ರಮದ ವತಿಯಿಂದ ಪ್ರಾರಂಭಿಸಬೇಕೆಂದುಕೊಂಡಿರುವ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಭೂಮಿ ಪೂಜೆಯು ಹೈದರಾಬಾದ್ ನ ಖ್ಯಾತ ಸಾಯಿಭಕ್ತರಾದ ಸಾಯಿನಾಮ ಶ್ರೀ.ಡಿ.ಶಂಕರಯ್ಯ ನವರ ಮಾರ್ಗದರ್ಶನದಲ್ಲಿ ಇದೇ ತಿಂಗಳ 26ನೇ ಏಪ್ರಿಲ್ 2012, ಗುರುವಾರ ಬೆಳಿಗ್ಗೆ 9 ಗಂಟೆಗೆ ನೆರವೇರಿತು.ಆಂಧ್ರಪ್ರದೇಶದ ಹೈದರಾಬಾದ್ ನ ಖ್ಯಾತ ಪುರೋಹಿತರಾದ ಪಂಡಿತ್ ಶ್ರೀ.ರಾಮಮುರ್ತಿ ಯವರ ಮಾರ್ಗದರ್ಶನದಲ್ಲಿ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಭೂಮಿಪೂಜೆ ಹಾಗೂ ದತ್ತ ಹೋಮವನ್ನು ಆಚರಿಸಲಾಯಿತು. ನೂರಾರು ಸ್ಥಳೀಯ ಸಾಯಿಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಡವರಿಗೆ ಉಚಿತ ವಸ್ತ್ರಗಳ ವಿತರಣೆಯನ್ನು ಕೂಡ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿರಡಿ ಸಾಯಿಬಾಬಾರವರ ಆಶೀರ್ವಾದದಿಂದ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಸೇವಾ ಕಾರ್ಯಕ್ರಮಗಳು ಇನ್ನಷ್ಟು ತೀವ್ರ ಗತಿಯಲ್ಲಿ ಮುಂದುವರಿಯುತ್ತದೆ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಟ್ರಸ್ಟ್ ನ ಸದಸ್ಯರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.










ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಒಳ್ಳೆಯ ಕಾರ್ಯಕ್ಕೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: 

ಡಾ.ಕುಮುದ್ ಚಂದ್ರ ಬೆಹೆರಾ (ಪಿ.ಹೆಚ್.ಡಿ), 
ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), 
ಬಡುವಾ, ಗೊಲಿಯಾ ಅಂಚೆ, 
ಬುಗುಡಾ ಮಾರ್ಗ, ಗಂಜಾಂ ಜಿಲ್ಲೆ, 
ಒರಿಸ್ಸಾ- 761 118, ಭಾರತ.  
ದೂರವಾಣಿ ಸಂಖ್ಯೆ: +91 94380 36171 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment