Thursday, April 19, 2012

ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), ಗಂಜಾಂ, ಒರಿಸ್ಸಾ ಭೂಮಿಪೂಜಾ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ 

ಒರಿಸ್ಸಾರಾಜ್ಯದ ಗಂಜಾಂ ಜಿಲ್ಲೆಯ ಬಡುವಾದಲ್ಲಿರುವ ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮವು ತಮ್ಮ ಆಶ್ರಮದ ವತಿಯಿಂದ ಪ್ರಾರಂಭಿಸಬೇಕೆಂದುಕೊಂಡಿರುವ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಭೂಮಿ ಪೂಜೆಯನ್ನು ಹೈದರಾಬಾದ್ ನ ಖ್ಯಾತ ಸಾಯಿಭಕ್ತರಾದ ಸಾಯಿನಾಮ ಶ್ರೀ.ಡಿ.ಶಂಕರಯ್ಯ ನವರ ಮಾರ್ಗದರ್ಶನದಲ್ಲಿ ಇದೇ ತಿಂಗಳ 26ನೇ ಏಪ್ರಿಲ್ 2012, ಗುರುವಾರ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಂಡಿದೆ. ಈ ಸ್ಥಳದಲ್ಲಿ ಪ್ರತಿನಿತ್ಯ ಸಾಮೂಹಿಕ ಪ್ರಾರ್ಥನೆ, ಆರತಿ, ಅನ್ನದಾನ, ಧುನಿಯ ಸ್ಥಾಪನೆ ಮತ್ತು ನಿಯಮಿತವಾಗಿ ಸ್ಥಳೀಯ ಗುಡ್ಡಗಾಡು ಪ್ರದೇಶದ ಬಡಜನರಿಗೆ ಉಚಿತ ವೈದ್ಯಕೀಯ ತಪಾಸಣೆಯ ಶಿಬಿರವನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಟ್ರಸ್ಟ್ ನ ಆಡಳಿತ ಮಂಡಳಿಯು ಹೊಂದಿರುತ್ತದೆ. ಈ ಟ್ರಸ್ಟ್ ನ್ನು 2009 ನೇ ಇಸವಿಯಲ್ಲಿ ನೋಂದಣಿ ಮಾಡಿಸಲಾಗಿದ್ದು ಈಗಾಗಲೇ ಈ ಟ್ರಸ್ಟ್ ನ ಮೂಲಕ ನಿಯಮಿತವಾಗಿ ಭಜನೆಯ ಕಾರ್ಯಕ್ರಮಗಳು, ಅನ್ನದಾನ, ಉಚಿತವಾಗಿ ವಸ್ತ್ರಗಳ ವಿತರಣೆ ಮತ್ತು ಸ್ಥಳೀಯ ಗುಡ್ಡಗಾಡು ಪ್ರದೇಶದ ಬಡಜನರಿಗೆ ಉಚಿತ ವೈದ್ಯಕೀಯ ತಪಾಸಣೆಯ ಶಿಬಿರವನ್ನು ಈ ಭಾಗದ ವಿವಿಧ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಟ್ರಸ್ಟ್ ನ್ನು ಆದಾಯ ತೆರಿಗೆಯ ಸೆಕ್ಷನ್ 12AA ಮತ್ತು 80G  ನ ಅಡಿಯಲ್ಲಿ ನೋಂದಣಿ ಮಾಡಲಾಗಿರುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: 

ಡಾ.ಕುಮುದ್ ಚಂದ್ರ ಬೆಹೆರಾ (ಪಿ.ಹೆಚ್.ಡಿ), 
ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), 
ಬಡುವಾ, ಗೊಲಿಯಾ ಅಂಚೆ, 
ಬುಗುಡಾ ಮಾರ್ಗ, ಗಂಜಾಂ ಜಿಲ್ಲೆ, 
ಒರಿಸ್ಸಾ- 761 118, ಭಾರತ.  
ದೂರವಾಣಿ ಸಂಖ್ಯೆ: +91 94380 36171 

                                                  
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment