Thursday, January 3, 2013

ಹುಬ್ಬಳ್ಳಿಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳ (ನೋಂದಣಿ), ಉಣಕಲ್ ರೈಲು ನಿಲ್ದಾಣದ ಎದುರುಗಡೆ, ಶಿರಡಿ ನಗರ, ಹುಬ್ಬಳ್ಳಿ-580 032, ಧಾರವಾಡ ಜಿಲ್ಲೆ, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಶಿರಡಿ ನಗರದ ಉಣಕಲ್ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೆಂಟ್ರಲ್ ಸ್ಕೂಲ್ ನ ಹತ್ತಿರ ಇರುತ್ತದೆ. ದೇವಾಲಯವು ಹುಬ್ಬಳ್ಳಿಯ ಉಣಕಲ್ ರೈಲು ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ. ದೇವಾಲಯವನ್ನು 30,000 ಚದರ ಅಡಿ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ದೇವಾಲಯದ ಭೂಮಿಪೂಜೆಯನ್ನು 1988 ನೇ ಇಸವಿಯ ಯುಗಾದಿ ಹಬ್ಬದ ದಿನದಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 24ನೇ ಮಾರ್ಚ್ 1993 ರಂದು ಪ್ರಖ್ಯಾತ ಸಾಯಿಭಕ್ತರಾದ ಸಾಯಿರತ್ನ ಶ್ರೀ.ಎಂ.ರಂಗಾಚಾರಿಯವರು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು, ಬೆಂಗಳೂರಿನ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷರಾದ ಶ್ರೀ.ಸಿ.ವಿ.ಭಾಸ್ಕರ ರಾವ್ ಮತ್ತು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಕೆ.ಆರ್.ಗೋಪಿನಾಥ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷಯಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಮೊದಲನೇ ಮಹಡಿಯಲ್ಲಿರುವ ಗರ್ಭಗುಡಿಯಲ್ಲಿ 5-1/2  ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಕಪ್ಪು ಶಿಲೆಯ ಗಣಪತಿ, ಅಮೃತಶಿಲೆಯ ದತ್ತಾತ್ರೇಯ ದೇವರ ವಿಗ್ರಹಗಳನ್ನು  ಕೂಡ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.

ದೇವಾಲಯದ ನೆಲಮಾಳಿಗೆಯಲ್ಲಿ ಶ್ರೀ ವಿವೇಕಾನಂದ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದ್ದು ಇದರ ಉದ್ಘಾಟನೆಯನ್ನು 25ನೇ ಮಾರ್ಚ್ 1993 ರಂದು ಅಂದಿನ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷೆಯಾದ ಪ್ರೊಫೆಸರ್ ಡಾ.ಲೇಖಾ ಪಾಠಕ್ ರವರು ನೆರವೇರಿಸಿರುತ್ತಾರೆ. ಈ ಸ್ಥಳದಲ್ಲಿರುವ ಗೋಡೆಯಲ್ಲಿ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಎರಡು ಭಾವಚಿತ್ರಗಳ ಮಧ್ಯದಲ್ಲಿ ಪವಿತ್ರ "ಓಂ" ಅನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ.

ಶ್ರೀ ಸಾಯಿಬಾಬಾ ಭಕ್ತ ನಿವಾಸದ ಶಂಕುಸ್ಥಾಪನೆಯನ್ನು 25ನೇ ಮಾರ್ಚ್ 1993 ರಂದು ಖ್ಯಾತ ಉದ್ಯಮಿ ಹಾಗೂ ದಾನಿಗಳಾದ ಶ್ರೀ.ಆರ್.ಎನ್.ಶೆಟ್ಟಿಯವರು ನೆರವೇರಿಸಿರುತ್ತಾರೆ.

ನೆಲಮಾಳಿಗೆಯಲ್ಲಿರುವ ಧ್ಯಾನ ಮಂದಿರದ ಪಕ್ಕದಲ್ಲಿರುವ ಸಣ್ಣ ಮಂದಿರದಲ್ಲಿ ಸುಮಾರು 2-1/2 ಅಡಿ ಎತ್ತರದ ಸುಂದರ ಕಪ್ಪುಶಿಲೆಯ ಹನುಮಂತನ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ಮುಖ್ಯ ದೇವಾಲಯದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಅಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಧುನಿಯ ಎದುರುಗಡೆ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಭಾವಚಿತ್ರವನ್ನು ಇರಿಸಲಾಗಿದೆ.

ದೇವಾಲಯದ ಪ್ರಾಂಗಣದ ಮುಂಭಾಗದಲ್ಲಿ ಪವಿತ್ರ ಬೇವಿನ ಮರದ ಅಡಿಯಲ್ಲಿ ಗುರುಸ್ಥಾನವನ್ನು ಸ್ಥಾಪಿಸಲಾಗಿದೆ.

ದೇವಾಲಯದಲ್ಲಿ ಸುಂದರ ಮರದ ಪಲ್ಲಕ್ಕಿಯನ್ನು ಇರಿಸಲಾಗಿದ್ದು ಇದನ್ನು ಗುರುವಾರ ಹಾಗೂ ಹಬ್ಬದ ದಿನಗಳಂದು ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತಿದೆ.

ದೇವಾಲಯದ ಹಿಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ವಿಶಾಲವಾದ ಕಲ್ಯಾಣ ಮಂಟಪ ಹಾಗೂ ಪ್ರಸಾದಾಲಯವನ್ನು ಸ್ಥಾಪಿಸಲಾಗಿದೆ. ಕಲ್ಯಾಣ ಮಂಟಪವನ್ನು ಸ್ಥಳೀಯರಿಗೆ ಅತ್ಯಂತ ಕಡಿಮೆ ದರದಲ್ಲಿ ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳನ್ನು ನೆರವೇರಿಸಲು ನೀಡಲಾಗುತ್ತಿದೆ. ಪ್ರಸಾದಾಲಯವನ್ನು ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಅನ್ನದಾನಕ್ಕೆ ಬಳಸಲಾಗುತ್ತಿದೆ.



















ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ದೇವಾಲಯದ ಸಮಯ:

ಬೆಳಿಗ್ಗೆ : 5:00 ರಿಂದ 1:30.
ಸಂಜೆ : 4:00 ರಿಂದ 9:30.

ಗುರುವಾರದಂದು ದೇವಾಲಯವನ್ನು ಬೆಳಿಗ್ಗೆ 5:00 ರಿಂದ ರಾತ್ರಿ 10:30 ರವರೆಗೆ ಇಡೀ ದಿನ ದರ್ಶನಕ್ಕೆ ತೆರೆದಿಡಲಾಗಿರುತ್ತದೆ.


ಆರತಿಯ ಸಮಯ:

ಕಾಕಡಾ ಆರತಿ : 5:15  ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : ಸೂರ್ಯಾಸ್ತ ಸಮಯ
ಶೇಜಾರತಿ      : 9:00 ಗಂಟೆ

ಗುರುವಾರದಂದು ಮಧ್ಯಾನ್ಹ ಆರತಿಯನ್ನು 12:30 ಕ್ಕೆ ಹಾಗೂ ಶೇಜಾರತಿಯನ್ನು ರಾತ್ರಿ 10:30 ಕ್ಕೆ ನೆರವೇರಿಸಲಾಗುತ್ತದೆ.

ಪ್ರತಿದಿನ ಬೆಳಿಗ್ಗೆ 7:00 ಕ್ಕೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ, ರುದ್ರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ.

ಪ್ರತಿ ಭಾನುವಾರ ಹಾಗೂ ಹುಣ್ಣಿಮೆಯ ದಿನಗಳಂದು ಸಂಜೆ 5:00 ಗಂಟೆಗೆ ಸತ್ಯನಾರಾಯಣ ಪೂಜೆಯನ್ನು  ಆಚರಿಸಲಾಗುತ್ತದೆ.


ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ ಯುಗಾದಿಯಂದು ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.
ಕಾರ್ತೀಕ ದೀಪೋತ್ಸವ.


ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ಗುರುವಾರ ಬೆಳಿಗ್ಗೆ ಹಾಗೂ ಸಂಜೆ ದೇವಾಲಯಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಗುತ್ತಿದೆ.

ಪ್ರತಿ ತಿಂಗಳಿನ ಮೊದಲನೇ ಗುರುವಾರದಂದು ದೇವಾಲಯದ ಆವರಣದಲ್ಲಿ ಉಚಿತ ಹೋಮಿಯೋಪಥಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರತಿವರ್ಷ ದೇವಾಲಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.


ದೇಣಿಗೆಗೆ ಮನವಿ:

ದೇವಾಲಯದ ದಿನಿನಿತ್ಯದ ಆಗುಹೋಗುಗಳಿಗಾಗಿ, ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ   ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ದೇಣಿಗೆಯನ್ನು ನೀಡಲು ಬಯಸುವ ಸಾಯಿಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳ (ನೋಂದಣಿ)", ಭಾರತೀಯ ಸ್ಟೇಟ್ ಬ್ಯಾಂಕ್, ರಾಜಾನಗರ ಶಾಖೆ, ಹುಬ್ಬಳ್ಳಿ, ಖಾತೆ ಸಂಖ್ಯೆ: 30100714156 ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಉಣಕಲ್ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೆಂಟ್ರಲ್ ಸ್ಕೂಲ್ ನ ಹತ್ತಿರ, ಶಿರಡಿ ನಗರ, ಹುಬ್ಬಳ್ಳಿ.


ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳ (ನೋಂದಣಿ),
ಉಣಕಲ್ ರೈಲು ನಿಲ್ದಾಣದ ಎದುರುಗಡೆ, ಶಿರಡಿ ನಗರ,
ಹುಬ್ಬಳ್ಳಿ-580 032, ಧಾರವಾಡ ಜಿಲ್ಲೆ,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಪಿ.ಎನ್.ದೊಂಗಾಡಿ - ಅಧ್ಯಕ್ಷರು / ಶ್ರೀ.ರುಕ್ಮಾಸಾ ಬಿ.ಹಬೀಬ್.

ದೂರವಾಣಿ ಸಂಖ್ಯೆಗಳು:
+91 98440 75526 / +91 94481 30953 /+91 836 3200125 (ದೇವಾಲಯ)



ಮಾರ್ಗಸೂಚಿ:
ದೇವಾಲಯವು ಹುಬ್ಬಳ್ಳಿಯ ಶಿರಡಿ ನಗರದ ಉಣಕಲ್ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೆಂಟ್ರಲ್ ಸ್ಕೂಲ್ ನ ಹತ್ತಿರ ಇರುತ್ತದೆ. ದೇವಾಲಯವು ಹುಬ್ಬಳ್ಳಿಯ ಉಣಕಲ್ ರೈಲು ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment