Sunday, November 15, 2009

ಶ್ರೀ ಶಿರಡಿ ಸಾಯಿಬಾಬಾರವರ ಹನ್ನೊಂದು ಅಭಿವಚನಗಳು ರಚನೆ: ಶ್ರೀ.ಮೋಹನಿರಾಜ್ ಪಂಡಿತ್, ನಾಸಿಕ್ ನ ನಿವೃತ್ತ ಮಾಮಲೇದಾರರು

 


  1. ಯಾರು ಶಿರಡಿಯ ನೆಲದ ಮೇಲೆ ತಮ್ಮ ಪಾದಗಳನ್ನು ಇಡುವರೋ ಅವರ ಕಷ್ಟಗಳು ಕೊನೆಗಾಣುವುವು.
  2. ಈ ನನ್ನ ಸಮಾಧಿಯ ಮೆಟ್ಟಿಲುಗಳನ್ನು ಹತ್ತಿದ ತಕ್ಷಣ ನಿಮ್ಮ ಎಲ್ಲಾ ದು:ಖಗಳೂ ಕೊನೆಗಾಣುವುವು.
  3. ಈ ಪಾರ್ಥಿವ ದೇಹವನ್ನು ತ್ಯಜಿಸಿದ ನಂತರವೂ ನಾನು ನನ್ನ ಭಕ್ತರಿಗೆ ನೆರವಾಗುವೆನು.
  4. ನನ್ನ ಸಮಾಧಿಯೇ ನಿಮ್ಮ ಎಲ್ಲಾ ಬಯಕೆಗಳನ್ನು ಈಡೇರಿಸುತ್ತದೆ.ಅದರ ಮೇಲೆ ಸಂಪೂರ್ಣ ನಂಬಿಕೆ ಹಾಗೂ ಅನನ್ಯ ವಿಶ್ವಾಸವನ್ನಿಡಿ.
  5. ನಾನು ನಿತ್ಯ ಜೀವಂತನಾಗಿರುವೆನು. ಇದನ್ನೇ ಸತ್ಯವೆಂದು ತಿಳಿಯಿರಿ. ಆಗ ನೋಡಿ. ನನ್ನ ಲೀಲೆಗಳು ತಾನಾಗಿಯೇ ನಿಮ್ಮ ಅನುಭವಕ್ಕೆ ಬರುತ್ತವೆ.   
  6. ನನ್ನಲ್ಲಿ ಶರಣಾಗತರಾಗಿ, ನನ್ನ ರಕ್ಷಣೆಯನ್ನು ಬಯಸಿ ನನ್ನನ್ನರಸಿ ಬಂದ ಯಾರನ್ನಾದರೂ ಪಕ್ಕಕ್ಕೆ ತಳ್ಳಿದ ಉದಾಹರಣೆಯನ್ನು ತೋರಿಸಿ. 
  7. ನೀವು ಯಾವ ತೀವ್ರತೆಯಲ್ಲಿ ನನ್ನನ್ನು ಪ್ರಾರ್ಥಿಸುತ್ತೀರೋ, ಅದೇ ತೀವ್ರತೆಯಲ್ಲಿ ನಾನು ನಿಮಗೆ ಸ್ಪಂದಿಸುವೆನು. 
  8. ನಿಮ್ಮ ಭಾರವನ್ನು ನಾನು ಯಾವಾಗಲೂ ಹೊರುವೆನು. ಯಾವುದೇ ಅನುಮಾನವಿಲ್ಲದೇ ಇದನ್ನೇ ಪ್ರಮಾಣವೆಂದು ತಿಳಿಯಿರಿ. 
  9. ನೀವು ನನ್ನ ಸಹಾಯವನ್ನು ಬಯಸಿದಲ್ಲಿ ಅದನ್ನು ಖಂಡಿತವಾಗಿ ಪಡೆಯುತ್ತೀರಿ. 
  10. ಯಾರು ತಮ್ಮ ತನು-ಮನ-ಧನಗಳನ್ನು ಅರ್ಪಿಸಿ ನನ್ನಲ್ಲಿ ಒಂದಾಗುತ್ತಾರೋ, ಜೀವನಪರ್ಯಂತ ಅವರಿಗೆ ನಾನು ಋಣಿಯಾಗಿರುತ್ತೇನೆ. 
  11. ಯಾರು "ಸಾಯಿ ಸಾಯಿ" ಎಂಬ ನಾಮೋಚ್ಛಾರಣೆ ಮಾಡುತ್ತಾ ನನ್ನ ಪಾದಗಳಿಗೆ ಭಕ್ತಿಯಿಂದ ನಮಿಸುವರೋ ಅವರನ್ನು ನಾನು ಅನುಗ್ರಹಿಸುತ್ತೇನೆ.     


ಕನ್ನಡ ಅನುವಾದ: ಶ್ರೀಕಂಠ ಶರ್ಮ