Friday, August 14, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ)ಯು ಶಿರಡಿ ಗ್ರಾಮಸ್ಥರ ಸಹಯೋಗದೊಂದಿಗೆ ಇದೇ ತಿಂಗಳ 15ನೇ ಆಗಸ್ಟ್ 2015, ಶನಿವಾರದಿಂದ 23ನೇ ಆಗಸ್ಟ್ 2015, ಭಾನುವಾರದವರಗೆ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 13ನೇ ಆಗಸ್ಟ್ 2015, ಗುರುವಾರ ದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು

ಮಹಾಪಾರಾಯಣದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 7:00 ರಿಂದ 11:30 ರವರಗೆ ಗಂಡಸರಿಗೂ ಹಾಗೂ ಮಧ್ಯಾನ್ಹ 1:00 ರಿಂದ ಸಂಜೆ 5:30 ರವರಗೆ ಹೆಂಗಸರಿಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ

ಮಹಾಪಾರಾಯಣದ ಮೊದಲನೇ ದಿನವಾದ 15ನೇ ಆಗಸ್ಟ್ 2015, ಶನಿವಾರ ದಂದು ಸಂಜೆ 7:30 ರಿಂದ ರಾತ್ರಿ  9:00 ರವರಗೆ ಮುಂಬೈನ ಶ್ರೀಮತಿ.ಪದ್ಮಾ ರಾಮಸ್ವಾಮಿಯವರಿಂದ ಬಾಲ ಗೋಪಾಲ ಭಜನೆಯ ಕಾರ್ಯಕ್ರಮವನ್ನು ಮತ್ತು ರಾತ್ರಿ 9:00 ರಿಂದ 10.15 ರವರಗೆ ಆದರ್ಶ ಪ್ರೌಢಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಎರಡನೇ ದಿನವಾದ 16ನೇ ಆಗಸ್ಟ್ 2015, ಭಾನುವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ದೆಹಲಿಯ ಪ್ರಸಿದ್ಧ ಗಾಯಕ ಶ್ರೀ.ಸುಖ್ವಿಂದರ್ ಸಿಂಗ್ ರವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಮೂರನೇ ದಿನವಾದ 17ನೇ ಆಗಸ್ಟ್ 2015, ಸೋಮವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ದಿವಂಗತ ವೀರ ಸಾವರ್ಕರ್ ರವರ ಜೀವನ ಚರಿತ್ರೆಯ  ದೆಹಲಿಯ ಪ್ರಸಿದ್ಧ ಗಾಯಕ ಶ್ರೀ.ಸುಖ್ವಿಂದರ್ ಸಿಂಗ್ ರವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ನಾಲ್ಕನೇ ದಿನವಾದ 18ನೇ ಆಗಸ್ಟ್ 2015, ಮಂಗಳವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ಸದ್ಗುರು ಸಾಯಿನಾಥ ಮಿತ್ರ ಮಂಡಳಿ, ದೆಹಲಿಯ ಶ್ರೀಮತಿ.ವೈಶಾಲಿ ರಾಜ್ ರವರಿಂದ "ರಾಧಾ ಕೃಷ್ಣ ಮತ್ತು ಗೀತಾ" ಎಂಬ ಶೀರ್ಷಿಕೆಯಡಿಯಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಐದನೇ ದಿನವಾದ 19ನೇ ಆಗಸ್ಟ್ 2015, ಬುಧವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ಶ್ರೀ.ಸಂತೋಷ್ ಪವಾರ್ ರವರಿಂದ "ಝರಾ ಹವಾ ಯೇವು ಧ್ಯಾ" ಎಂಬ ನಾಟಕವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಆರನೇ ದಿನವಾದ 20ನೇ ಆಗಸ್ಟ್ 2015, ಗುರುವಾರ  ದಂದು ಸಂಜೆ 7:30 ರಿಂದ ರಾತ್ರಿ  9:00 ರವರಗೆ ಶ್ರೀ.ರಾಹುಲ್ ಶೋಲಾಪುರ್ ಕರ್ ರವರಿಂದ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ಹಾಗೂ ರಾತ್ರಿ 9:00 ರಿಂದ 10.15 ರವರಗೆ ಪುಣೆಯ   ಶ್ರೀಮತಿ.ಶುಭಾಂಗಿ ಮೂಳೆಯವರಿಂದ ಗೀತಬಹಾರ್  ಸಂಗೀತ  ಕಾರ್ಯಕ್ರಮವನ್ನು  ಏರ್ಪಡಿಸಲಾಗಿದೆ.

ಮಹಾಪಾರಾಯಣದ ಏಳನೇ ದಿನವಾದ 21ನೇ ಆಗಸ್ಟ್ 2015, ಶುಕ್ರವಾರ ದಂದು ಸಂಜೆ 5:30 ಕ್ಕೆ ಸುವಾಸಿನಿಯರಿಂದ ಅರಿಶಿನ ಮತ್ತು ಕುಂಕುಮ ಸಾಂಪ್ರದಾಯಿಕ ಕಾರ್ಯಕ್ರಮ ಹಾಗೂ ಸಂಜೆ 7:30 ರಿಂದ ರಾತ್ರಿ 10:15 ರವರಗೆ ದೆಹಲಿಯ ಸದ್ಗುರು ಸಾಯಿನಾಥ ಮಿತ್ರ ಮಂಡಳಿಯ ಶ್ರೀ.ಸುನೀಲ್ ಸರ್ಗಮ್ ರವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಎಂಟನೇ ದಿನವಾದ 22ನೇ ಆಗಸ್ಟ್ 2015, ಶನಿವಾರ ದಂದು ಬೆಳಿಗ್ಗೆ 7:00 ರಿಂದ 8:30 ರವರಗೆ ಪುರುಷ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡಿ ಸುಸಂಪನ್ನಗೊಳಿಸುವರು. ಹಾಗೂ 9:30 ಕ್ಕೆ ಮಹಿಳಾ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡಿ ಸುಸಂಪನ್ನಗೊಳಿಸುವರುಮಧ್ಯಾನ್ಹ 3:30 ರಿಂದ ಸಂಜೆ 6:00 ರವರಗೆ ಶ್ರೀ ಸಾಯಿ ಸಚ್ಚರಿತ್ರೆ ಪವಿತ್ರ ಗ್ರಂಥವನ್ನು ಶಿರಡಿ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ರಾತ್ರಿ 7:30 ರಿಂದ 10:15 ರವರಗೆ ಶ್ರೀ.ಮನ್ಹರ್ ಉದಾಸ್ ರವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ

ಮಹಾಪಾರಾಯಣದ ಅಂತಿಮ ದಿನವಾದ 23ನೇ ಆಗಸ್ಟ್ 2015, ಭಾನುವಾರ ದಂದು ಬೆಳಿಗ್ಗೆ  9:30 ರಿಂದ ಮಧ್ಯಾನ್ಹ 12:00 ರವರಗೆ ಪುಣತಾಂಬೆಯ ಮುಕ್ತ ಜ್ಞಾನ ಪೀಠದ ಹರಿ ಭಕ್ತ ಪರಾಯಣರಾದ ಸ್ವಾಮಿ ರಮಾನಂದ ಗಿರಿ ಮಹಾರಾಜ್ ರವರಿಂದ "ಕಲ್ಯಾಚೆ ಕೀರ್ತನೆ" ಕಾರ್ಯಕರ್ಮವನ್ನು ಹಮ್ಮಿಕೊಳ್ಳಲಾಗಿದೆ.  ಮಧ್ಯಾನ್ಹ 12:30 ರಿಂದ ಸಂಜೆ 4:00 ರವರಗೆ ಎಲ್ಲ ಸಾಯಿಭಕ್ತರಿಗೂ "ಮಹಾಪ್ರಸಾದ ಭಂಡಾರ" ವನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ, ಸಂಜೆ 7:30 ರಿಂದ ರಾತ್ರಿ 10:15 ರವರಗೆ ಸಂಗಮನೇರದ ಪ್ರೊ.ಎಸ್.ಜೆಡ್.ದೇಶಮುಖ್ ರವರಿಂದ "ಶಿವ್ ಛತ್ರಪತಿ"  ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ

ಮೇಲಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹನುಮಾನ್ ಮಂದಿರದ ಹತ್ತಿರ ನಿರ್ಮಿಸಲಾಗಿರುವ ಮಹಾ ಪಾರಾಯಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಹಾಗೂ ಶ್ರೀ ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಮೂಲಕ ಮನವಿ ಮಾಡಿಕೊಳ್ಳುತ್ತಾರೆ

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 

ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment