Tuesday, August 11, 2015

ಶ್ರೀ ಸಾಯಿಬಾಬಾ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹೆಚ್ಚುವರಿ ಶ್ರೀ ಸಾಯಿ ಸತ್ಯವ್ರತ ಪೂಜೆಗಳ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮುಂಬರುವ ಶ್ರಾವಣ ಮಾಸದಲ್ಲಿ ಶಿರಡಿಗೆ ಹರಿದು ಬರುವ ಭಕ್ತ ಸಾಗರ ಹಾಗೂ ಈ ಪವಿತ್ರ ಮಾಸದಲ್ಲಿ ಸತ್ಯನಾರಾಯಣ ಪೂಜೆಯನ್ನು ಆಚರಿಸುವುದಕ್ಕೆ ನೀಡಿರುವ ಹೆಚ್ಚಿನ ಪ್ರಾಶಸ್ತ್ಯವನ್ನು ಮನಗಂಡು ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 15ನೇ ಆಗಸ್ಟ್ 2015 ರಿಂದ  13ನೇ ಸೆಪ್ಟೆಂಬರ್ 2015 ರವರೆಗೆ ಶ್ರೀ ಸಾಯಿ ಸತ್ಯವ್ರತ ಪೂಜೆಯ ಆರು ತಂಡ (ಬ್ಯಾಚ್) ಗಳನ್ನು ವ್ಯವಸ್ಥೆ ಮಾಡಿದೆ ಎಂದು ಶ್ರೀ ಸಾಯಿಬಾಬಾ  ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 11th August 2015, ಮಂಗಳವಾರ ದಂದು ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 


ಸಾಮಾನ್ಯವಾಗಿ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 8, 9 ರಿಂದ 10 ಮತ್ತು 11 ರಿಂದ 12 ರವರೆಗೆ ಶ್ರೀ ಸಾಯಿ ಸತ್ಯವ್ರತದ ಮೂರು ತಂಡಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.ಆದರೆ ನಮ್ಮ ಸಂಪ್ರದಾಯದ ಪ್ರಕಾರ ಶ್ರಾವಣ ಮಾಸದಲ್ಲಿ ಆಚರಿಸುವ  ಶ್ರೀ ಸಾಯಿ ಸತ್ಯನಾರಾಯಣ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆದ ಕಾರಣ, ಈ ಸಮಯದಲ್ಲಿ ಭಕ್ತರಿಂದ ಶ್ರೀ ಸಾಯಿ ಸತ್ಯವ್ರತದ ಪೂಜೆಯ ಟಿಕೇಟ್ ಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎಂದು ಶ್ರೀ.ರಾಜೇಂದ್ರ ಜಾಧವ್ ತಿಳಿಸಿದರು. 

ಆದುದರಿಂದ, ಭಕ್ತರ ಕೋರಿಕೆಯ ಮೇರೆಗೆ ಶ್ರೀ ಸಾಯಿಬಾಬಾ ಸಂಸ್ಥಾನವು ಈ ವರ್ಷದ ಶ್ರಾವಣ ಮಾಸದಲ್ಲಿ 6 ತಂಡಗಳನ್ನು ಆಯೋಜಿಸಿದ್ದು ಮೊದಲನೇ ತಂಡ ಬೆಳಿಗ್ಗೆ 7 ರಿಂದ 8,  ಎರಡನೇ ತಂಡ  9 ರಿಂದ 10, ಮೂರನೇ ತಂಡ  11 ರಿಂದ 12, ನಾಲ್ಕನೇ ತಂಡ ಮಧ್ಯಾನ್ಹ 1 ರಿಂದ  2, ಐದನೇ ತಂಡ  3 ರಿಂದ 4, ಮತ್ತು ಆರನೇ ತಂಡವನ್ನು ಸಂಜೆ 5 ರಿಂದ 6 ಗಂಟೆಯವರಗೆ ಆಯೋಜಿಸಿದೆ. ಪ್ರತಿಯೊಂದು ತಂಡದಲ್ಲಿ 100 ಜನ ಭಕ್ತರಿಗೆ ಶ್ರೀ ಸಾಯಿ ಸತ್ಯವ್ರತದ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಪೂಜೆಗಳಿಗೆ ಚೀಟಿಯನ್ನು ಒಂದು ದಿನ ಮುಂಚಿತವಾಗಿ ಮಧ್ಯಾನ್ಹ  2 ಗಂಟೆಯಿಂದ ಸಂಸ್ಥಾನದ ಕಚೇರಿಯಲ್ಲಿ ವಿತರಿಸಲಾಗುವುದು. ಪೂಜೆಯ ವೇಳೆಯಲ್ಲಿ ಆಗಿರುವ ಈ ತಾತ್ಕಾಲಿಕ ಬದಲಾವಣೆಗೆ ಸಾಯಿ ಭಕ್ತರು ಸಹಕರಿಸಬೇಕೆಂದು ಶ್ರೀ.ಜಾಧವ್ ರವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment