Wednesday, November 26, 2014

ಮಹಿಳಾ ಕ್ರೀಡಾ ಕೂಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡ ಶ್ರೀ ಸಾಯಿಬಾಬಾ ಹುಡುಗಿಯರ ಶಾಲೆಯ ವಿದ್ಯಾರ್ಥಿನಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ಶೈಕ್ಷಣಿಕ ಯೋಜನೆಯ ಅಡಿಯಲ್ಲಿ ನಡೆಸಲಾಗುತ್ತಿರುವ  ಶ್ರೀ ಸಾಯಿಬಾಬಾ ಹುಡುಗಿಯರ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಗಾಯತ್ರಿ ವಾಮನ ತಕ್ರೆ ಇದೇ ತಿಂಗಳ 18ನೇ ನವೆಂಬರ್ 2014, ಮಂಗಳವಾರದಂದು ನಡೆದ ಮಹಿಳಾ ಕ್ರೀಡಾ ಕೂಟದ 100 ಮೀಟರ್ ಹರ್ಡಲ್ ಓಟದ ಸ್ಪರ್ಧೆಯಲ್ಲಿ ಎರಡನೆಯವಳಾಗಿ ಬರುವ ಮೂಲಕ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಳು. ಈ ವಿಷಯವನ್ನು  ಶ್ರೀ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳು 25ನೇ ನವೆಂಬರ್ 2014, ಮಂಗಳವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು. 

ಮಹಾರಾಷ್ಟ್ರ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯು  ಇದೇ ತಿಂಗಳ 18ನೇ ನವೆಂಬರ್ 2014, ಮಂಗಳವಾರದಂದು ಸ್ವಾಮಿ ವಿವೇಕಾನಂದ ರಾಜ್ಯ ಮಹಿಳೆಯರ ಕ್ರೀಡಾ ಸ್ಪರ್ಧೆ 2014-15 ಎಂಬ ಹೆಸರಿನ  ಈ ರಾಜ್ಯ ಮಟ್ಟದ ಈ ಮಹಿಳಾ ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದರಲ್ಲಿ  ಶ್ರೀ ಸಾಯಿಬಾಬಾ ಹುಡುಗಿಯರ ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಗಾಯತ್ರಿ ವಾಮನ ತಕ್ರೆ ಮತ್ತು ಕುಮಾರಿ ಪಲ್ಲವಿ ಆರ್ಕಾಸ್ ರವರುಗಳು ಭಾಗವಹಿಸಿದ್ದರು. ಈ ಕ್ರೀಡಾಕೂಟದ 100 ಮೀಟರ್ ಹರ್ಡಲ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಮಾರಿ ಗಾಯತ್ರಿ ವಾಮನ ತಕ್ರೆ ಎರಡನೆಯವಳಾಗಿ ಬರುವ ಮೂಲಕ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಳು. ಇವಳ ಈ ಯಶಸ್ಸಿಗೆ ಈಕೆಯ ತರಬೇತುದಾರರಾದ ಶ್ರೀ.ಸುಜಯ್ ಬಬ್ಬರ್ ರವರ ಅತ್ಯಮೂಲ್ಯ ಮಾರ್ಗದರ್ಶನವೇ ಕಾರಣವೆಂದು ಹೇಳಬಹುದು. 

ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಅಧ್ಯಕ್ಷ ಮತ್ತು ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ದಿಲೀಪ್ ಉಗಳೆ, ಪ್ರಾಂಶುಪಾಲೆಯಾದ ಶ್ರೀಮತಿ.ನೀತಾ ಚಾವಂಕೆ ಇಬ್ಬರು ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿದ್ದಷ್ಟೇ ಅಲ್ಲದೇ  ಅವರ ಮುಂದಿನ ವ್ಯಾಸಂಗಕ್ಕೆ ಶುಭವನ್ನು ಸಹ ಕೋರಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಅಂಗ್ಲ ಭಾಷೆಯಿಂದ ಕನ್ನಡಕ್ಕೆ : ಶ್ರೀಕಂಠ ಶರ್ಮ 

No comments:

Post a Comment