Friday, August 31, 2012

ಹೊಸೂರಿನ ಶಿರಡಿ ಸಾಯಿಬಾಬಾ ಮಂದಿರ - ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಮಂಗಳಮ್ ಟ್ರಸ್ಟ್ (ನೋಂದಣಿ), ನಂ.2/357,ರಾಯಕೋಟಾ ಮುಖ್ಯರಸ್ತೆ, ಗೋಕುಲನಗರ, ರಂಗೋಪೊಂಡಿಥ ಅಗ್ರಹಾರಂ, ಹೊಸೂರು-635 109, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಟ್ಟಣದ ರಾಯಕೋಟಾ ಮುಖ್ಯರಸ್ತೆಯಲ್ಲಿರುವ   ರಂಗೋಪೊಂಡಿಥ ಅಗ್ರಹಾರಮ್ ನಲ್ಲಿರುವ ಗೋಕುಲನಗರದಲ್ಲಿ ಇರುತ್ತದೆ. ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 4 ನೇ ಏಪ್ರಿಲ್ 2006 ರಂದು ನೆರವೇರಿಸಲಾಯಿತು.

ದೇವಾಲಯವನ್ನು ಗುರೂಜಿ ಶ್ರೀ.ಚಂದ್ರಭಾನು ಸತ್ಪತಿಯವರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಖರೀದಿಸಿದ 2 ಎಕರೆ ಭೂಮಿಯಲ್ಲಿ  ಯಾರಿಂದಲೂ ದೇಣಿಗೆಯನ್ನು ಸ್ವೀಕರಿಸದೇ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 24ನೇ ಏಪ್ರಿಲ್ 2010 ರಂದು ಗುರೂಜಿ ಶ್ರೀ.ಚಂದ್ರಭಾನು ಸತ್ಪತಿಯವರು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ. ಖ್ಯಾತ ಸಾಯಿ ಭಕ್ತರಾದ ಶ್ರೀ.ಕೆ.ವಿ.ರಮಣಿ ಮತ್ತು ಶ್ರೀ.ಕೆ.ವಿ.ಭಾಸ್ಕರನ್ ರವರುಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ.ಎಂ.ಸುಗುಣರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷೆಯಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವನ್ನು ಮೊದಲನೇ ಮಹಡಿಯಲ್ಲಿ ನಿರ್ಮಿಸಲಾಗಿದ್ದು ಇಲ್ಲಿ  6 ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎಕ್ಕೆಲಗಳಲ್ಲಿ 2 ಅಡಿ ಎತ್ತರದ ಅಮೃತಶಿಲೆಯ ಗಣಪತಿ  ಹಾಗೂ  ಗಾಯತ್ರಿದೇವಿಯ ವಿಗ್ರಹಗಳನ್ನು ಸ್ಥಾಪನೆ ಮಾಡಲಾಗಿದೆ. ಅಮೃತಶಿಲೆಯ ಪಾದುಕೆಗಳನ್ನು 3 ವಿಗ್ರಹಗಳ ಮುಂದೆ ಸ್ಥಾಪಿಸಲಾಗಿದೆ. ಅಲ್ಲದೇ, ಪ್ರಖ್ಯಾತ ಸಂತರಾದ ಹಜರತ್ ತಾಜುದ್ದೀನ್ ಬಾಬಾರವರ ಆಳೆತ್ತರದ ಭಾವಚಿತ್ರವನ್ನು ಕೂಡ ದೇವಾಲಯದಲ್ಲಿ ನೋಡಬಹುದು.

ದೇವಾಲಯದ ಕೆಳಮಹಡಿಯಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ.

ಪವಿತ್ರ ಬೇವಿನ ಮರ ಹಾಗೂ ಅರಳಿ ಮರಗಳನ್ನು ದೇವಾಲಯದ ಆವರಣದಲ್ಲಿ ನೋಡಬಹುದು.













ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6 ಗಂಟೆಯಿಂದ 12.30 ಗಂಟೆಯವರೆಗೆ.
ಸಂಜೆ:  5.00 ರಿಂದ 8:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ : 6:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 6:00 ಗಂಟೆ
ಶೇಜಾರತಿ      : 8:00 ಗಂಟೆ

ಪ್ರತಿ ಗುರುವಾರ ಬೆಳಿಗ್ಗೆ 6:30 ಕ್ಕೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರೂಪಾಯಿಗಳು. ಪೂಜಾ ಸಾಮಗ್ರಿಗಳನ್ನು ಹಾಗೂ ಪ್ರಸಾದವನ್ನು ದೇವಾಲಯದ ವತಿಯಿಂದ ವಿತರಿಸಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ಹಾಗೂ ಸಂಕಷ್ಟ ಚತುರ್ಥಿಯಂದು ಸಂಕಷ್ಟಹರ ಗಣಪತಿ ವ್ರತವನ್ನು ಸಂಜೆ 6:30 ಕ್ಕೆ ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 24ನೇ ಏಪ್ರಿಲ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ಶ್ರೀರಾಮನವಮಿ.
ಗಾಯತ್ರಿ ಪ್ರತಿಪತ್.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ ಇರುತ್ತದೆ.
.

ವಿಳಾಸ:
ಶಿರಡಿ ಸಾಯಿ ಮಂದಿರ,
ಶ್ರೀ ಶಿರಡಿ ಸಾಯಿ ಮಂಗಳಮ್ ಟ್ರಸ್ಟ್ (ನೋಂದಣಿ),
ನಂ.2/357,ರಾಯಕೋಟಾ ಮುಖ್ಯರಸ್ತೆ,
ಗೋಕುಲನಗರ, ರಂಗೋಪೊಂಡಿಥ ಅಗ್ರಹಾರಂ,
ಹೊಸೂರು-635 109, ಕೃಷ್ಣಗಿರಿ ಜಿಲ್ಲೆ,
ತಮಿಳುನಾಡು, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀಮತಿ.ಎಂ.ಸುಗುಣ - ಟ್ರಸ್ಟಿ

ದೂರವಾಣಿ ಸಂಖ್ಯೆಗಳು:
+ 91 90035 63623 / +91 4344 291253

ಇ ಮೇಲ್ ವಿಳಾಸ: 
pmiapuram@gmail.com


ಅಂತರ್ಜಾಲ ತಾಣ:
www.shirdisaimangalam.org


ಮಾರ್ಗಸೂಚಿ:
ಹೊಸೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ರಾಯಕೋಟಾ ಮುಖ್ಯರಸ್ತೆಗೆ ಹೋಗುವ ಯಾವುದೇ ಬಸ್ ನಲ್ಲಿ ಹತ್ತಿ ಪೆಟ್ರೋಲ್ ಬಂಕ್ ನ ಹತ್ತಿರ ಇಳಿಯುವುದು. ದೇವಾಲಯವು  ಹೊಸೂರು ಬಸ್  ನಿಲ್ದಾಣದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ ಇರುತ್ತದೆ. ದೇವಾಲಯವನ್ನು ತಲುಪಲು ಹೇರಳವಾಗಿ ಆಟೋಗಳ ಸೌಲಭ್ಯ ಕೂಡ ಇರುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, August 23, 2012

  ಪುಣೆಯ ಸಾಯಿಭಕ್ತರೊಬ್ಬರಿಂದ ಸಾಯಿಬಾಬಾರವರಿಗೆ ಚಿನ್ನದ ಕಿರೀಟದ ಕೊಡುಗೆ - ಕೃಪೆ:ಸಾಯಿಅಮೃತಧಾರಾ.ಕಾಂ

ಪುಣೆಯ ಸಾಯಿಭಕ್ತರಾದ ಶ್ರೀ.ಶಿವಾಜಿ ಮಾನಕರ್ ರವರು ಇದೇ ತಿಂಗಳ 23ನೇ ಆಗಸ್ಟ್ 2012, ಗುರುವಾರದಂದು 900 ಗ್ರಾಂ ತೂಕದ ಹಾಗೂ ಸುಮಾರು ಇಪ್ಪತ್ತಾರು ಲಕ್ಷ ಐವತ್ತೈದು ಸಾವಿರ (26,55,000/- ಮಾತ್ರ) ಬೆಲೆಬಾಳುವ ಚಿನ್ನದ ಕಿರೀಟವನ್ನು ಸಾಯಿಬಾಬಾರವರಿಗೆ ಕೊಡುಗೆಯಾಗಿ ನೀಡಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, August 19, 2012

ಗೋವಾ ರಾಜ್ಯದ ರಾಜ್ಯಪಾಲರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಗೋವಾ ರಾಜ್ಯದ ರಾಜ್ಯಪಾಲರಾದ ಶ್ರೀ.ಭರತ್ ವೀರ್ ವಾಂಚೂರವರು ಇದೇ ತಿಂಗಳ 19ನೇ ಆಗಸ್ಟ್ 2012, ಭಾನುವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ ರಾವ್ ಮಾನೆಯವರು ಕೂಡ ಉಪಸ್ಥಿತರಿದ್ದರು. 


 ಕನ್ನಡ ಅನುವಾದ:ಶ್ರೀಕಂಠ ಶರ್ಮ 

Friday, August 10, 2012

ಶಿರಡಿಯ ಸುತ್ತಮುತ್ತ ನೋಡಬೇಕಾದ ಸ್ಥಳ - ಗುರು ಶುಕ್ರಾಚಾರ್ಯ ಮಂದಿರ - ಕೃಪೆ: ಸಾಯಿಅಮೃತಧಾರಾ.ಕಾಂ

ದೈತ್ಯಗುರು ಶುಕ್ರಾಚಾರ್ಯರ ಈ ವಿಶೇಷ ಮಂದಿರವು ಶಿರಡಿಯಿಂದ ಕೇವಲ 15 ಕಿಲೋಮೀಟರ್ ಗಳ ಅಂತರದಲ್ಲಿ ಅಹಮದ್ ನಗರ ಮನಮಾಡ ಮುಖ್ಯ ರಸ್ತೆಯಲ್ಲಿದೆ.ಈ ಮಂದಿರವು 400 ವರ್ಷಗಳಿಗೂ ಹಳೆಯದಾಗಿದ್ದು ಪ್ರಪಂಚದಲ್ಲೇ ಮೊದಲ ಮಂದಿರವಾಗಿರುತ್ತದೆ.  ಈ ಪುರಾಣ ಪ್ರಸಿದ್ಧ ಸ್ಥಳಕ್ಕೆ ಶಿರಡಿಯಿಂದ ಹೇರಳವಾಗಿ ಆಟೋಗಳು ಸಿಗುತ್ತವೆ.



ಶುಕ್ರಾಚಾರ್ಯರ ಹಿನ್ನೆಲೆ:

ಶುಕ್ರಾಚಾರ್ಯರು ಅಥರ್ವಣ ವೇದಕ್ಕೆ ಸೇರಿದ ಮತ್ತು ಋಷಿ ಕವಿಯ ವಂಶಕ್ಕೆ ಸೇರಿದ ಭಾರ್ಗವ ಋಷಿಗಳು. ದೇವಿ ಭಾಗವತ ಪುರಾಣದ ಪ್ರಕಾರ ಇವರ ತಾಯಿ ಕಾವ್ಯಮಾತ. ಶುಕ್ರ ಗ್ರಹವು ಸ್ತ್ರೀ ಜಾತಿಗೆ ಸೇರಿದ್ದು, ಬ್ರಾಹ್ಮಣ ವರ್ಣವಾಗಿರುತ್ತದೆ. ಇವರು ಪಾರ್ಥಿವ ನಾಮ ಸಂವತ್ಸರದ ಶ್ರಾವಣ ಶುದ್ಧ ಅಷ್ಟಮಿಯ ಶುಕ್ರವಾರದಂದು ಸ್ವಾತಿ ನಕ್ಷತ್ರ ಮತ್ತು ಲಗ್ನದಲ್ಲಿ ಜನಿಸಿದರು. ಆದುದರಿಂದ ಶುಕ್ರವಾರವೆಂಬ ಹೆಸರು ಬಂದಿರುತ್ತದೆ. ಇವರು ಋಷಿ ಆಂಗೀರಸರ ಬಳಿ ವೇದವನ್ನು ಕಲಿಯಲು ಸೇರಿದರು. ಆದರೆ, ಅವರು ತಮ್ಮ ಮಗನಾದ ಬೃಹಸ್ಪತಿಗೆ ಹೆಚ್ಚಿನ ಮಹತ್ವವನ್ನು ನೀಡುವುದು ಇವರಿಗೆ ಸರಿ ಬೀಳಲಿಲ್ಲ. ಆದುದರಿಂದ, ಇವರು ಋಷಿ ಗೌತಮರ ಬಳಿ ವೇದವನ್ನು ಕಲಿಯಲು ಸೇರಿದರು. ನಂತರ ಶಿವನನ್ನು ಕುರಿತು ಅತ್ಯಂತ ಕಠಿಣ ತಪಸ್ಸನ್ನು ಆಚರಿಸಿ ಮೃತ ಸಂಜೀವಿನಿ ಮಂತ್ರವನ್ನು ಪಡೆಯುತ್ತಾರೆ. ಇದರಿಂದ ಸತ್ತವರನ್ನು ಬದುಕಿಸಲು ಶುಕ್ರಾಚಾರ್ಯರು ಸಮರ್ಥರಾಗುತ್ತಾರೆ. ಇವರು ಪ್ರಿಯವ್ರಜರ ಮಗಳಾದ ಊರ್ಜಸ್ವಾತಿಯನ್ನು ವಿವಾಹವಾಗುತ್ತಾರೆ. ಇವರಿಗೆ ದೇವಯಾನಿ ಎಂಬ ಹೆಣ್ಣು ಮಗಳು ಹಾಗೂ ಚಂದ, ಅಮಾರ್ಕ, ತ್ವಸ್ತರ, ಧರಾತ್ರ  ಎಂಬ 4 ಗಂಡು ಮಕ್ಕಳು ಜನಿಸುತ್ತಾರೆ. 



ಈ ಸಮಯದಲ್ಲಿ ಬೃಹಸ್ವತಿಯು ದೇವತೆಗಳ ಗುರುವಾಗುತ್ತಾರೆ.ತನ್ನ ತಾಯಿಯು ವಿಷ್ಣುವು ಹುಡುಕುತ್ತಿದ್ದ ಅನೇಕ ರಾಕ್ಷಸರಿಗೆ ಆಶ್ರಯ ನೀಡಿದ್ದರಿಂದ ಕುಪಿತಗೊಂಡ ವಿಷ್ಣುವು ಅವರನ್ನು ಸಂಹಾರ ಮಾಡಿದ್ದಾನೆಂದು ತಪ್ಪು ತಿಳಿದ ಶುಕ್ರಾಚಾರ್ಯರು ವಿಷ್ಣುವಿನ ಮೇಲಿನ ದ್ವೇಷದಿಂದ ದೈತ್ಯರ ಗುರುವಾಗಲು ಇಚ್ಚಿಸುತ್ತಾರೆ. ತಾನು ಶಿವನಿಂದ ಪಡೆದ ಸಂಜೀವಿನಿ ಮಂತ್ರದ ಪ್ರಭಾವದಿಂದ ದೇವತೆಗಳಿಂದ ಸಂಹಾರವಾಗುತ್ತಿದ್ದ ರಾಕ್ಷಸರನ್ನು ಬದುಕಿಸಲು ಪ್ರಾರಂಭಿಸುತ್ತಾರೆ ಹಾಗೂ ದೈತ್ಯರು ದೇವತೆಗಳ ಮೇಲೆ ವಿಜಯ ಸಾಧಿಸಲು ಸಹಾಯ ಮಾಡುತ್ತಾರೆ. 




ಶುಕ್ರಾಚಾರ್ಯರ ಮಗಳಾದ ದೇವಯಾನಿಯನ್ನು ಬೃಹಸ್ಪತಿಗಳ ಪುತ್ರನಾದ ಕಚನು ಗುರುಪುತ್ರಿ ಎಂಬ ಕಾರಣದಿಂದ ವಿವಾಹವಾಗಲು ಒಪ್ಪುವುದಿಲ್ಲ. ನಂತರ ದೇವಯಾನಿಯು ಕುರುವಂಶದ ಯಯಾತಿಯನ್ನು ವಿವಾಹವಾಗುತ್ತಾಳೆ. 







ಮಹಾಭಾರತದ ಸಮಯದಲ್ಲಿ, ಶುಕ್ರಾಚಾರ್ಯರನ್ನು ಭೀಷ್ಮರ ಗುರುವೆಂದು ಹೇಳಲಾಗುತ್ತದೆ. ಶುಕ್ರಾಚಾರ್ಯರು ಭೀಷ್ಮಾಚಾರ್ಯರ ಚಿಕ್ಕ ವಯಸ್ಸಿನಲ್ಲಿ ರಾಜನೀತಿಯ ಪಾಠವನ್ನು ಹೇಳಿಕೊಟ್ಟರು ಎಂದು ಹೇಳಲಾಗುತ್ತದೆ.

ಶುಕ್ರಾಚಾರ್ಯ ಮಂದಿರದ ಇತಿಹಾಸ:

ಪೇಶ್ವೇ ವಂಶದ ಕಡೆಯ ಪೀಳಿಗೆಯವರಾದ 2ನೇ ಬಾಜೀರಾವ್ ರವರ ತಂದೆ ರಘುನಾಥ ರಾವ್ ಆಲಿಯಾಸ್ ರಾಘೋಬ  ರವರು ಕೋಪರಗಾವ್ ನ ನಿವಾಸಿಯಾಗಿದ್ದರು. ಅವರ ಮರಣದ ನಂತರ ಕೋಪರಗಾವ್ ನಿಂದ 3 ಮೈಲು ದೂರದ ಹಿಂಗ್ನಿಯಲ್ಲಿ ಅವರ ದೇಹವನ್ನು ಸಂಸ್ಕಾರ ಮಾಡಲಾಯಿತು. ಈ ಸ್ಥಳದಲ್ಲಿ ಇದ್ದ ಇವರ ಅರಮನೆಯ ಫಲಕಗಳಲ್ಲಿ ಇದರ ಉಲ್ಲೇಖವಿದೆ. 1804 ನೇ ಇಸವಿಯಲ್ಲಿ ಕಾಂದೇಶದ ರಾಜ್ಯಪಾಲನಾಗಿದ್ದ ಬಾಲಾಜಿ ಲಕ್ಷ್ಮಣ ಮತ್ತು ಮನೋಹರಗೀರ್ ಗೋಸಾವಿ ಜೊತೆಗೂಡಿ ಕೋಪರಗಾವ್ ನಲ್ಲಿ ಅಧಿಕಾರದಲ್ಲಿದ್ದ ಸುಮಾರು 7000 ಕ್ಕೂ ಹೆಚ್ಚು ಬಿಲ್ಲರನ್ನು ಮೋಸದಿಂದ ಸೋಲಿಸಿ ಅವರಲ್ಲಿ ಹೆಚ್ಚಿನವರನ್ನು ಅಲ್ಲಿದ ಎರಡು ಬಾವಿಗಳಿಗೆ ಎಸೆಯುತ್ತಾರೆ. 1818 ನೇ ಇಸವಿಯಲ್ಲಿ ಕೋಪರಗಾವ್ ಅನ್ನು ಮದ್ರಾಸಿನ ಪಡೆಗಳು ಆಕ್ರಮಿಸುತ್ತಾರೆ. ದೈತ್ಯ ರಾಜನಾದ ವೃಷಪರ್ವನ ಗುರುವಾದ ಶುಕ್ರಾಚಾರ್ಯರು ಮೃತ ಸಂಜೀವಿನಿ ವಿದ್ಯೆಯನ್ನು ಕೋಪರಗಾವ್ ನಲ್ಲಿ ಶಿವನಿಂದ ಪಡೆದರು ಎಂದು ಹೇಳಲಾಗುತ್ತದೆ.

ಕೋಪರಗಾವ್ ನ ಹತ್ತಿರದಲ್ಲಿರುವ ಈ ಸ್ಥಳದಲ್ಲಿ ಶುಕ್ರಾಚಾರ್ಯ, ದೇವಯಾನಿ ಮತ್ತು ಕಾಚೇಶ್ವರರ ಮಂದಿರಗಳಿವೆ.

ಶುಕ್ರಾಚಾರ್ಯ ಹಾಗೂ ಶಿವನಿಗೆ ಅವಿನಾಭಾವ ಸಂಬಂಧವಿದೆ. ಹಾಗಾಗಿ, ಮಹಾಶಿವರಾತ್ರಿಯ ಪವಿತ್ರ ದಿನ ಅಥವಾ ಇನ್ನಿತರ ವಿಶೇಷ ಹಬ್ಬದ ದಿನಗಳಲ್ಲಿ ಈ ಸ್ಥಳದಲ್ಲಿರುವ ಶುಕ್ರಾಚಾರ್ಯರ ಮಂದಿರವನ್ನು ಸಂದರ್ಶಿಸಿದರೆ ವಿಶೇಷವಾಗಿ ಆಶೀರ್ವದಿಸಲ್ಪಡುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಆದ ಕಾರಣ, ಪ್ರಪಂಚದ ಅನೇಕ ಸ್ಥಳಗಳಿಂದ ಭಕ್ತರು ಮಹಾಶಿವರಾತ್ರಿ ಹಾಗೂ ಇನ್ನಿತರ ವಿಶೇಷ ಹಬ್ಬದ ದಿನಗಳಲ್ಲಿ ಇಲ್ಲಿಗೆ ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬೇಟ್ ಕೋಪರಗಾವ್ ನಲ್ಲಿರುವ ಈ ಶುಕ್ರಾಚಾರ್ಯರ ಮಂದಿರ ಪ್ರಪಂಚದ ಒಂದು ವಿಶೇಷ ಮಂದಿರವೆಂದರೆ ತಪ್ಪಾಗಲಾರದು.

ಮುಖ್ಯ ದೇವಾಲಯದಲ್ಲಿ ಶುಕ್ರಾಚಾರ್ಯರ ವಿಗ್ರಹ ಹಾಗೂ ಶಿವಲಿಂಗ ಇದೆ. ದೇವಾಲಯದ ಹೊರಭಾಗದಲ್ಲಿ ಕಪ್ಪು ಶಿಲೆಯ ನಂದಿಯ ಹಾಗೂ ಆಮೆಯ ವಿಗ್ರಹಗಳಿವೆ.

ಆಮೃತ ಶಿಲೆಯ ಘಾಟ್ ಗಣಪತಿ, ದುರ್ಗೆ, ವಿಷ್ಣು ಮತ್ತು ದತ್ತಾತ್ರೇಯ ದೇವರುಗಳನ್ನು ದೇವಾಲಯದ ಹೊರ ಆವರಣದಲ್ಲಿ ನಿರ್ಮಿಸಲಾಗಿರುವ ಪುಟ್ಟ ಗುಡಿಗಳಲ್ಲಿ ಇರಿಸಲಾಗಿದೆ. ದೇವಾಲಯವನ್ನು ಶಿವ ಪಂಚಾಯತನ ಪದ್ಧತಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ದೇವಾಲಯದ ಹೊರ ಭಾಗದಲ್ಲಿ ಸ್ವಲ್ಪವೇ ದೂರದಲ್ಲಿ ಕಾಚೇಶ್ವರ ಮತ್ತು ದೇವಯಾನಿಯ ದೇವಾಲಯಗಳನ್ನು ಕೂಡ ನಿರ್ಮಿಸಲಾಗಿದ್ದು, ಈ ಮಂದಿರಗಳನ್ನು ಕೂಡ ಶ್ರೀ.ಬೇಟ್ ಕೋಪರಗಾವ್ ದೇವಸ್ಥಾನ ಸಮಿತಿಯವರೇ ನೋಡಿಕೊಳ್ಳುತ್ತಿದ್ದಾರೆ.

ದೈತ್ಯ ಗುರು ಶುಕ್ರಾಚಾರ್ಯರ ವಂಶವೃಕ್ಷವನ್ನು ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:



ದೇವಾಲಯದಲ್ಲಿ ನಡೆಯುವ ದಿನನಿತ್ಯದ ಪೂಜಾ ಕೈಂಕರ್ಯಗಳು:

ಬೆಳಿಗ್ಗೆ 5:00          - ನಿರ್ಮಾಲ್ಯ ವಿಸರ್ಜನೆ, ದೇವಾಲಯದ ಶುಚೀಕರಣ.
ಬೆಳಿಗ್ಗೆ 6:00         - ಶೋಡಷೋಪಚಾರ ಪೂಜೆ, ರುದ್ರಾಭಿಷೇಕ ಮತ್ತು ಅಲಂಕಾರ.
ಬೆಳಿಗ್ಗೆ 10:30       - ದೇವರಿಗೆ ಮಹಾನೈವೇದ್ಯದ ಸಮರ್ಪಣೆ.
ಮಧ್ಯಾನ್ಹ 12:00  - ಆರತಿ ಮತ್ತು ಮಹಾಪ್ರಸಾದ.
ಸಂಜೆ 4:00        - ಸಾಯಂಕಾಲದ ಪೂಜೆ,ನಿರ್ಮಾಲ್ಯ ವಿಸರ್ಜನೆ, ದೇವಾಲಯದ ಶುಚೀಕರಣ.
ಸಂಜೆ 7:00        - ದೇವಾಲಯದ ಆವರಣದಲ್ಲಿ ದೀಪಗಳನ್ನು ಹಾಕುವುದು.
ರಾತ್ರಿ 8:00        - ಶೋಡಷೋಪಚಾರ ಪೂಜೆ, ರುದ್ರಾಭಿಷೇಕ,ಅಲಂಕಾರ ಮತ್ತು ಮಹಾನೈವೇದ್ಯದ ಸಮರ್ಪಣೆ.
ರಾತ್ರಿ 9:30        - ಧೂಪಾರತಿ ಮತ್ತು ಶೇಜಾರತಿ. ಮಂದಿರ ಮುಚ್ಚುತ್ತದೆ.


ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು:

ಚೈತ್ರ ಶುದ್ಧ ಪ್ರತಿಪತ್, ಗುಡಿ ಪಾಡ್ವ, ಗುರು ಶುಕ್ರಾಚಾರ್ಯರಿಂದ ಶಿಷ್ಯ ಕಚನ ಭೇಟಿ.
ವೈಶಾಖ ಶುದ್ಧ ತೃತೀಯ - ಅಕ್ಷಯ ತೃತೀಯ.
ಜ್ಯೇಷ್ಟ ಮಾಸ - ಶ್ರೀ ಗಂಗಾಮಾಯಿಯ 10 ದಿನಗಳ ಉತ್ಸವ.
ಆಷಾಢ ಮಾಸ - ಪ್ರತಿದಿನ ವಿಶೇಷ ಪೂಜೆ.
ಶ್ರಾವಣ ಮಾಸ - ತಿಂಗಳ 4 ಸೋಮವಾರಗಳಂದು ವಿಶೇಷ ಪೂಜೆ. ಸಂಜೆ 4 ರಿಂದ 6 ರವರೆಗೆ ಮಂದಿರದಿಂದ ಗೋದಾವರಿ ನದಿಯ ದಡದವರೆಗೆ ಮತ್ತು ಪುನಃ ಮಂದಿರದವರೆಗೆ ಪಲ್ಲಕ್ಕಿ ಉತ್ಸವ. ನಂತರ ದೇವರಿಗೆ ವಿಶೇಷ ಆರತಿಯ ಸಮರ್ಪಣೆ.
ಭಾದ್ರಪದ ಶುದ್ಧ ಚತುರ್ಥಿ - ಗಣೇಶ ಚತುರ್ಥಿ - ಪಲ್ಲಕ್ಕಿ ಉತ್ಸವ.
ಆಶ್ವಯುಜ ಶುದ್ಧ ದಶಮಿ - ವಿಜಯದಶಮಿ - ಪಲ್ಲಕ್ಕಿ ಉತ್ಸವ.
ಕಾರ್ತೀಕ ಮಾಸ - ಕಾರ್ತೀಕ ಪೂರ್ಣಿಮಾ - ಪಲ್ಲಕ್ಕಿ ಉತ್ಸವ.
ಮಾರ್ಗಶೀರ್ಷ ಮಾಸ - ಪ್ರತಿದಿನ ವಿಶೇಷ ಪೂಜೆ ಮತ್ತು ನೈವೇದ್ಯದ ಸಮರ್ಪಣೆ.
ಪುಷ್ಯ ಮಾಸ - ಮಕರ ಸಂಕ್ರಾಂತಿ ಉತ್ಸವ - ಶುಕ್ರಾಚಾರ್ಯರ ವಿಗ್ರಹಕ್ಕೆ ಪ್ರತಿನಿತ್ಯ ತೈಲಾಭಿಷೇಕದ ಸಮರ್ಪಣೆ.
ಮಾಘ ಮಾಸ - ಮಹಾಶಿವರಾತ್ರಿ ಉತ್ಸವ - ಪಲ್ಲಕ್ಕಿ ಉತ್ಸವ. ಕೋಪರಗಾವ್ ನಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ 10,000 ಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುತ್ತಾರೆ.
ಫಾಲ್ಗುಣ ಮಾಸ - ಹೋಳಿ ಹುಣ್ಣಿಮೆಯ ಹಬ್ಬದ ಆಚರಣೆ.

ದೇವಾಲಯದ ಸಂಪರ್ಕದ ವಿವರಗಳು:

ಗುರು ಶುಕ್ರಾಚಾರ್ಯ ಮಂದಿರ
ಶ್ರೀ ಬೇಟ್ ಕೋಪರಗಾವ್ ದೇವಸ್ಥಾನ ಸಮಿತಿ,
ಬೇಟ್ ಕೋಪರಗಾವ್ ಗ್ರಾಮ,
ಕೋಪರಗಾವ್ ತಾಲ್ಲೂಕು,
ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ,
ಪಿನ್ ಕೋಡ್- 423 601.
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ಬಾಳಾಸಾಹೇಬ್ ಮಾಲೋಜಿ ಅವಧ್ - ಸದಸ್ಯರು / ಶ್ರೀ.ಎ.ಎಲ್.ಕುಲಕರ್ಣಿ - ಅಧ್ಯಕ್ಷರು / ಶ್ರೀ.ನರೇಂದ್ರ ಪುರುಷೋತ್ತಮ ಜೋಷಿ - ಗುರೂಜಿ / ಶ್ರೀ.ರಮೇಶ್ ಭಾಗವತ್ ಗುರಾವ್ - ಪುರೋಹಿತರು.
ದೂರವಾಣಿ ಸಂಖ್ಯೆಗಳು: + 91 92262 17730 / +91 93710 35877 / +91 92262 17730 / +91 99752 24281 /+91 2423 223255 

ಕನ್ನಡ ಅನುವಾದ ಶ್ರೀಕಂಠ ಶರ್ಮ 
ಶಿರಡಿಯ ಸುತ್ತಮುತ್ತ ನೋಡಬೇಕಾದ ಸ್ಥಳಗಳು: ಶ್ರೀ ರಾಜಾ ವೀರಭದ್ರ ಮಂದಿರ (ವಿರೋಬ ಬನ್ ಕಾಂಚ್ ಮಂದಿರ) - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಶ್ರೀ ಸುಪ್ರಸಿದ್ಧ ರಾಜಾ ವೀರಭದ್ರ ಮಂದಿರ (ವಿರೋಬ ಬನ್ ಕಾಂಚ್ ಮಂದಿರ) ವು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ, ರಹತಾ ತಾಲ್ಲೂಕಿನ ಬನ್ ಎಂಬ ಹಳ್ಳಿಯಲ್ಲಿದೆ.  ಇದು ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಿಂದ ಕೇವಲ 5 ಕಿಲೋಮೀಟರ್ ಗಳ ಅಂತರದಲ್ಲಿದೆ. (ಸಾಯಿ ಸಚ್ಚರಿತ್ರೆ ಅಧ್ಯಾಯ 47).

ಈ ಸ್ಥಳದಲ್ಲಿ ಎರಡು ವಿರೋಬ ಮಂದಿರಗಳಿವೆ. ಒಂದು ಮಂದಿರವು ರಹತಾ ಗ್ರಾಮಕ್ಕೂ ಮತ್ತು ಮತ್ತೊಂದು ಮಂದಿರವು ಶಿರಡಿ ಗ್ರಾಮಕ್ಕೂ ಸೇರಿರುತ್ತವೆ. ಈ ಎರಡೂ ಮಂದಿರಗಳನ್ನು ಶ್ರೀ.ವೀರಭದ್ರ ದೇವಸ್ಥಾನ ಮತ್ತು ಉತ್ಸವ ಟ್ರಸ್ಟ್ (ನೋಂದಣಿ) ಯವರು ನೋಡಿಕೊಳ್ಳುತ್ತಾರೆ.

ಈ ದೇವಾಲಯಗಳು ಶಿರಡಿ ಸಾಯಿಬಾಬಾ ಸಮಾಧಿ ಮಂದಿರಕ್ಕೂ ಪುರಾತನದ್ದಾಗಿರುತ್ತದೆ. ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಬ್ರಿಟಿಷ್ ಸರ್ಕಾರವು ದೇವಾಲಯದ ಟ್ರಸ್ಟ್ ಗೆ ನೀಡಿರುತ್ತದೆ.

ಅತ್ಯಂತ ಹಳೆಯದಾಗಿ ಶಿಥಿಲಗೊಂಡಿದ್ದ ಈ ಮಂದಿರಗಳನ್ನು ಜೀರ್ಣೋದ್ಧಾರ ಮಾಡಲಾಯಿತು. ನವೀಕರಣಗೊಂಡ ಈ ದೇವಾಲಯಗಳನ್ನು 1999 ನೇ ಇಸವಿಯಲ್ಲಿ ಗಂಗಾಗಿರಿಯ ಪರಮಪೂಜ್ಯ ಶ್ರೀ.ರಾಮಗಿರಿ ಮಹಾರಾಜ್ ರವರು ಉದ್ಘಾಟಿಸಿರುತ್ತಾರೆ.

ಶ್ರೀ.ರತೀಲಾಲ್ ಪೂನಂಚಂದ್ ಲೋಧಾರವರು ಈ ದೇವಾಲಯಗಳ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ವೀರಭದ್ರ ದೇವಸ್ಥಾನ ಮತ್ತು ಉತ್ಸವ ಟ್ರಸ್ಟ್ (ನೋಂದಣಿ) ಯವರು ಈ ದೇವಾಲಯಗಳ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಎರಡೂ ದೇವಾಲಯಗಳಲ್ಲಿ ಶ್ರೀ.ವೀರಭದ್ರ ಸ್ವಾಮಿಯ ವಿಗ್ರಹ ಹಾಗೂ ಬೆಳ್ಳಿಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.









ದೇವಾಲಯದ ಸಮಯ:

ಬೆಳಿಗ್ಗೆ 7:00 ರಿಂದ ರಾತ್ರಿ 10:00 ರವರೆಗೆ.

ಆರತಿಯ ಸಮಯ:

ಬೆಳಿಗ್ಗೆ 7:00 ಗಂಟೆಗೆ.

ಪ್ರತಿದಿನ ಸಂಜೆ 7:00 ಗಂಟೆಗೆ ಭಜನೆ ಹಾಗೂ ಹರಿಕಥೆಯನ್ನು ಏರ್ಪಡಿಸಲಾಗುತ್ತದೆ.

ಪ್ರತಿ ಬುಧವಾರ ಸಂಜೆ 7:00 ಗಂಟೆಗೆ ಸಂತ ಯೋಗೇಶ್ವರ ಮಹಾರಾಜ್ ರವರ ನಾಮಜಪವನ್ನು ಏರ್ಪಡಿಸಲಾಗುತ್ತದೆ.

ಪ್ರತಿ ಶ್ರಾವಣ ಮಾಸದ ಪಾಡ್ಯದಿಂದ ಸಪ್ತಮಿಯವರೆಗೆ ಶ್ರೀ.ವೀರಭದ್ರ ಸ್ವಾಮಿ ಚರಿತ್ರೆಯ ಸಪ್ತಾಹ ಪಾರಾಯಣ ಏರ್ಪಡಿಸಲಾಗುತ್ತದೆ.

ಪ್ರತಿ ವರ್ಷದ ದಸರಾ ಉತ್ಸವದ ಸಮಯದಲ್ಲಿ ವಿಶೇಷ ನೃತ್ಯ ಹಾಗೂ ನಗಾರಿಯನ್ನು ಬಾರಿಸಲಾಗುತ್ತದೆ.

ಪ್ರತಿ ವರ್ಷದ ಕಾರ್ತೀಕ ಮಾಸದಲ್ಲಿ 3 ದಿನಗಳ ಕಾಲ ಉತ್ಯವವನ್ನು ಹಮ್ಮಿಕೊಳ್ಳಲಾಗುತ್ತದೆ. ಆ ಸಮಯದಲ್ಲಿ ಮಂದಿರದಿಂದ ಶಿರಡಿ ಗ್ರಾಮದವರೆಗೆ ಹಾಗೂ ಪುನಃ ಮಂದಿರಕ್ಕೆ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುತ್ತದೆ. ಅಲ್ಲದೇ ಉತ್ಸವದ 3 ದಿನಗಳೂ ಅನ್ನದಾನ ಹಮ್ಮಿಕೊಳ್ಳಲಾಗುತ್ತದೆ.


ದೇವಾಲಯದ ಸಂಪರ್ಕದ ವಿವರಗಳು:

ಶ್ರೀ ರಾಜಾ ವೀರಭದ್ರ ಮಂದಿರ
ವಿರೋಬ ಬನ್ ಕಾಂಚ್ ಮಂದಿರ,
ಶ್ರೀ.ವೀರಭದ್ರ ದೇವಸ್ಥಾನ ಮತ್ತು ಉತ್ಸವ ಟ್ರಸ್ಟ್ (ನೋಂದಣಿ),
ಬನ್ ರಸ್ತೆ, ಬನ್ ಗ್ರಾಮ, ಶಿರಡಿ-423 109
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ,
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ರತೀಲಾಲ್ ಪೂನಂಚಂದ್ ಲೋಧಾ / ಶ್ರೀ.ನಾಮದೇವ ದಾದಾ ಬಣಕಾರ್ ಮೊಬೈಲ್ ಸಂಖ್ಯೆಗಳು: + 91 98225 01037 / +91 98819 75964


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, August 9, 2012

ಶಿರಡಿಯ ಸುತ್ತಮುತ್ತ ನೋಡಬೇಕಾದ ಸ್ಥಳ -  ರಾಷ್ಟ್ರ ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ (24ನೇ  ಸೆಪ್ಟೆಂಬರ್ 1914 – 10ನೇ ಡಿಸೆಂಬರ್ 1989) ಸಮಾಧಿ ಮಂದಿರ- ಕೃಪೆ: ಸಾಯಿಅಮೃತಧಾರಾ.ಕಾಂ


ನಿಷ್ಕಾಮ ಕರ್ಮಯೋಗಿ ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ ರವರು ಭಾರತದ ಸಂತ ಪರಂಪರೆಯಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಮಹಾನ್ ಸಂತರು. ಸ್ವಾಮೀಜಿಯವರು ತಮ್ಮ ಕೊನೆಯ ದಿನಗಳವರೆಗೆ ಜನ ಸಾಮಾನ್ಯರಲ್ಲಿ ಭಕ್ತಿಯನ್ನು  ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದರು. 





ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ ರವರು 24 ನೇ ಸೆಪ್ಟೆಂಬರ್1914 (ಆಶ್ವಯುಜ ಶುದ್ಧ ಲಲಿತಾ ಪಂಚಮಿ, ಶಕೆ 1836) ರಂದು ಪವಿತ್ರ ಮರಾಠವಾಡಾದ ಔರಂಗಾಬಾದ್ ಜಿಲ್ಲೆಯ ಕನ್ನಾಡ್ ತಾಲ್ಲೂಕಿನ ಟೇಪರಗಾವ್ ನ ರೈತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀ.ಅಪ್ಪಾ ಸಾಹೇಬ್ ಪಾಟೀಲ್ ಉಗಳೆ ಮತ್ತು ತಾಯಿ ಶ್ರೀಮತಿ.ಮಹಾಳಸಾಬಾಯಿ. ತಮ್ಮ ಚಿಕ್ಕ ವಯಸ್ಸಿನಲ್ಲೇ ಇವರು ಆಡುವ ಮಾತುಗಳು, ನಡೆ-ನುಡಿಗಳು ಹಾಗೂ ಇವರ ವರ್ತನೆಯನ್ನು ನೋಡಿದ ಎಲ್ಲರಿಗೂ ಇವರ ದೈವಿಕ ಶಕ್ತಿಯ ಅರಿವಾಗಿತ್ತು. 



ಸ್ವಾಮೀಜಿಯವರು ಸಂಪ್ರದಾಯಬದ್ಧವಾದ "ಸಾಧನೆ" ಹಾಗೂ ಮಹಾರಾಷ್ಟ್ರದ "ವಾರಕರಿ" ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಅತ್ಯಂತ ಕಡಿಮೆ ಸಮಯದಲ್ಲಿಯೇ ಪಂತಜಲಿ ಮಹರ್ಷಿಗಳ ಯೋಗ ಸೂತ್ರದಲ್ಲಿ ನಿರ್ದೇಶಿಸಿದಂತೆ "ಯೋಗಸಿದ್ಧಿ" ಯನ್ನು ಪಡೆದುಕೊಂಡಿದ್ದರು. 


ಸ್ವಾಮೀಜಿಯವರು ತಮ್ಮ ಬಾಲ್ಯದ ದಿನಗಳಿಂದಲೂ ಹನುಮಾನ್ ಮತ್ತು ಶಿವನ ಅನನ್ಯ ಭಕ್ತರಾಗಿದ್ದರು. ಆದುದರಿಂದ, ಆಗಾಗ್ಗೆ  ಇವರು ನಿಯಮಿತವಾಗಿ ಕಠಿಣ ಉಪವಾಸ ವ್ರತಗಳನ್ನು ಕೈಗೊಳ್ಳುತ್ತಿದ್ದರು. ಇವರಿಗೆ ನಾಗೇಶ್ವರ ಶಿವ, ಪಿನಾಕೇಶ್ವರ ಶಿವ ಮತ್ತು ಪರೇಶ್ವರ ಶಿವನ ಸಾಕ್ಷಾತ್ಕಾರವಾಗಿತ್ತು. ಇವರು ತಮ್ಮ ಬಾಲ್ಯದಿಂದ ಪರಬ್ರಹ್ಮನಲ್ಲಿ ಲೀನವಾಗುವರೆಗೆ ನಿಯಮಿತವಾಗಿ ಪೂಜೆ-ಪುನಸ್ಕಾರಗಳು, ಯಜ್ಞ-ಯಾಗಾದಿಗಳನ್ನು ನೆಡೆಸಿಕೊಂಡು ಬಂದರು. ಇವರು ವೇದ, ಉಪನಿಷತ್ ಹಾಗೂ ಅನೇಕ ಅಧ್ಯಾತ್ಮಿಕ ಗ್ರಂಥಗಳನ್ನು ಅಭ್ಯಾಸ ಮಾಡಿ ದಿನನಿತ್ಯ ನಡೆಸುವ ಪೂಜಾ ಪದ್ಧತಿಯನ್ನು ರೂಪಿಸಿದ್ದರು. ಇವರು ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ 3:30 ಕ್ಕೆ ಹಾಸಿಗೆಯಿಂದ ಎದ್ದು ನಿತ್ಯ ವಿಧಿಗಳನ್ನು ಸೂರ್ಯೋದಯಕ್ಕೆ ಮುಂಚೆಯೇ ಮುಗಿಸುತ್ತಿದ್ದರು. ಅಲ್ಲದೇ, ತಮ್ಮ ಭಕ್ತರ ಜೊತೆಯಲ್ಲಿ ಪೂಜೆ, ಪ್ರಾಣಾಯಾಮ, ಜಪ ಮತ್ತು ಧ್ಯಾನವನ್ನು ಮಾಡುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆಧ್ಯಾತ್ಮಿಕ ವಿಷಯಗಳ ಮೇಲೆ ಪ್ರವಚನವನ್ನು ನೀಡುತ್ತಿದ್ದರು.  


ಸ್ವಾಮೀಜಿಯವರು ತಮ್ಮ ದೈವಿಕ ಶಕ್ತಿಯನ್ನು ಅನೇಕ ಬಾರಿ ತಮ್ಮ ಭಕ್ತರ ಎದುರು ಆಶ್ಚರ್ಯಕರ ರೀತಿಯಲ್ಲಿ ತೋರ್ಪಡಿಸುತ್ತಿದ್ದರು. 

ಸ್ವಾಮೀಜಿಯವರು ಮಹಾರಾಷ್ಟ್ರದ ಅನೇಕ ಸ್ಥಳಗಳಲ್ಲಿ ಪಾಳುಬಿದ್ದಿದ್ದ ಶಿವನ ದೇವಾಲಯಗಳ ಜೀರ್ಣೋದ್ಧಾರವನ್ನು ಕೈಗೊಂಡು ಅವುಗಳ ನವೀಕರಣ ಮಾಡಿದರು. ಅಲ್ಲದೇ, ಮಹಾರಾಷ್ಟ್ರದ 9 ಸ್ಥಳಗಳಲ್ಲಿ ಹೊಸದಾಗಿ ಶಿವನ ದೇವಾಲಯಗಳನ್ನು ನಿರ್ಮಾಣ ಮಾಡಿಸಿದರು. 

ಸ್ವಾಮೀಜಿಯವರು ಶಿಕ್ಷಣ ಕ್ಷೇತ್ರಕ್ಕೆ ಕೂಡ ಮಹತ್ವವನ್ನು ನೀಡಿ ಎಲ್ಲೋರ, ದಮಾನೆ, ಔರಂಗಾಬಾದ್ ಮತ್ತು ಬೇಟ್ ಕೋಪರಗಾವ್ ನಲ್ಲಿ ಗುರುಕುಲ ಪದ್ಧತಿಯಲ್ಲಿ ಶಾಲೆಗಳನ್ನು ಪ್ರಾರಂಭಿಸಿದರು. ಬಡ ಮಕ್ಕಳಿಗಾಗಿ ಉಚಿತ ಊಟ ಮತ್ತು ವಸತಿಯನ್ನು ಕಲ್ಪಿಸುವ ಸಲುವಾಗಿ ತ್ರಯಂಬಕೇಶ್ವರ, ನಾಸಿಕ್, ಔರಂಗಾಬಾದ್ ಮತ್ತು ಬೇಟ್ ಕೋಪರಗಾವ್ ನಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಅಲ್ಲದೇ, ಇವರು ಸ್ಥಾಪಿಸಿದ ಎಲ್ಲಾ ಆಶ್ರಮಗಳಲ್ಲಿ "ಗೋಶಾಲೆ" ಯನ್ನು ಪ್ರಾರಂಭಿಸಿ ಸಾವಿರಾರು ಹಸು-ಕರುಗಳಿಗೆ ಆಶ್ರಯವನ್ನು ನೀಡಿದರು. 

ಸ್ವಾಮೀಜಿಯವರು ಹಬ್ಬದ ದಿನಗಳಾದ ಅಕ್ಷಯ ತೃತೀಯ, ನಾಗಪಂಚಮಿ, ದತ್ತ ಜಯಂತಿ ಹಾಗೂ ಗುರುಪೂರ್ಣಿಮೆಯ ದಿನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಆ ಸಮಯದಲ್ಲಿ ಜಪ ಅನುಷ್ಟಾನವನ್ನು ಹಮ್ಮಿಕೊಳ್ಳುತ್ತಿದ್ದರು. ಅಕ್ಷಯ ತೃತೀಯ ದಿನದಂದು ವಿಶೇಷ ಯಜ್ಞವನ್ನು ಹಮ್ಮಿಕೊಳ್ಳುತ್ತಿದ್ದರು. ಎಲ್ಲಾ ಹಬ್ಬದ ದಿನಗಳಲ್ಲಿ ಆಶ್ರಮದಲ್ಲಿ ಅನ್ನದಾನವನ್ನು ಮಾಡಲಾಗುತ್ತಿತ್ತು. 

ಸ್ವಾಮೀಜಿಯವರು ಐಶ್ವರ್ಯ, ಅಂತಸ್ತು, ಹೆಸರು ಮತ್ತು ಕೀರ್ತಿಗಳಿಗಾಗಿ ಎಂದಿಗೂ ಆಸೆಪಡದೆ ತಮ್ಮ 75ನೇ ವಯಸ್ಸಿನವರೆವಿಗೂ ಅವಿರತವಾಗಿ ತಪಸ್ಸು ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಲೇ ಇದ್ದರು. ಇವರು ಸಾಮಾನ್ಯ ಜನರ ಉನ್ನತಿಗಾಗಿ ಹಾಗೂ ವಿಶ್ವಶಾಂತಿಗಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಹೀಗೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ 10ನೇ ಡಿಸೆಂಬರ್ 1989 ರಂದು ಸಂಜೆ 4:35 ಕ್ಕೆ ತಮ್ಮ ನಾಸಿಕ್ ನ ಆಶ್ರಮದಲ್ಲಿ ಪಂಚಭೂತಗಳಲ್ಲಿ ಲೀನವಾದರು. ಆದರೆ, ಸ್ವಾಮೀಜಿಯವರು ಮಾಡಿದ ಅಮೋಘ ಕಾರ್ಯಗಳಿಂದ ಅಮರರಾದರು. 

ಇವರು ತಮ್ಮ ಮಹಾನಿರ್ವಾಣಕ್ಕೆ 3 ದಿನಗಳ ಮುಂಚೆ ತಮಗೆ ಹತ್ತಿರವಾಗಿದ್ದ 10 ಜನ ಶಿಷ್ಯರನ್ನು ಕರೆದು ತಮ್ಮ ದೇಹವನ್ನು ಬೇಟ್ ಕೋಪರಗಾವ್ ನ ಆಶ್ರಮದಲ್ಲಿ ಸಮಾಧಿ ಮಾಡುವಂತೆ ಸೂಚನೆ ನೀಡಿದ್ದರು. ಅವರ ಆದೇಶದಂತೆ ಸ್ವಾಮೀಜಿಯವರ ದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು 11ನೇ ಡಿಸೆಂಬರ್ 1989 ರಂದು ಬೇಟ್ ಕೋಪರಗಾವ್ ನ ಆಶ್ರಮದಲ್ಲಿ ಸಮಾಧಿ ಮಾಡಲಾಯಿತು. ಲಕ್ಷಾಂತರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇವರ ಮಹಾನಿರ್ವಾಣದ 16ನೇ ದಿನದ ಕಾರ್ಯಕ್ರಮದಲ್ಲಿ ಸರಿ ಸುಮಾರು 7 ಲಕ್ಷ ಜನರು ಭಾಗವಹಿಸಿದ್ದರು. 

ಸ್ವಾಮೀಜಿಯವರ ಮೊದಲನೇ ಪುಣ್ಯತಿಥಿಯ ದಿನದಂದು ಸಮಾಧಿ ಮಂದಿರದ ಭೂಮಿಪೂಜೆಯನ್ನು ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಪೀಠಾಧಿಪತಿಗಳಾದ ಶ್ರೀ.ಶ್ರೀ.ಶ್ರೀ ವಾಸುದೇವಾನಂದ ಸರಸ್ವತಿ ಸಾಮೀಜಿಯವರು ನೆರವೇರಿಸಿದರು. ಆ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಸ್ವಾಮೀಜಿಗಳು, ಸಂತರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಆಶ್ರಮದ ಸಂಪರ್ಕದ ವಿವರಗಳು: 

ರಾಷ್ಟ್ರ ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ ಸಮಾಧಿ ಮಂದಿರ
ಬೇಟ್ ಕೋಪರಗಾವ್, ಅಹಮದ್ ನಗರ ಜಿಲ್ಲೆ - 423 601, ಮಹಾರಾಷ್ಟ್ರ,
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ವಿಜಯ ಜಾಧವ್ / ಶ್ರೀ.ಶಂಕರ ಪವಾರ್
ದೂರವಾಣಿ ಸಂಖ್ಯೆಗಳು: +91 2423 223 071 / 226 133 / 226134 / 223 071 (ಫ್ಯಾಕ್ಸ್)
ಮೊಬೈಲ್ ಸಂಖ್ಯೆಗಳು: +91 98222 25990 / +91 90286 87104
ಇ-ಮೈಲ್ ವಿಳಾಸ: janardanswamisamadhisthankop@gmail.com 

ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಶಿರಡಿಯ ಸುತ್ತಮುತ್ತ ನೋಡಬೇಕಾದ ಸ್ಥಳ -  ಜಂಗ್ಲಿ ಮಹಾರಾಜ್ ಆಶ್ರಮ - ಕೃಪೆ: ಸಾಯಿಅಮೃತಧಾರಾ.ಕಾಂ
 


ಜಂಗ್ಲಿ ಮಹಾರಾಜ್  ಆಶ್ರಮವು  ಶಿರಡಿಯಿಂದ 7 ಕಿಲೋಮೀಟರ್ ಗಳ ಅಂತರದಲ್ಲಿ ಕೋಪರಗಾವ್ - ಮನಮಾಡ ಹೆದ್ದಾರಿಯಲ್ಲಿದೆ.   ಪರಮ ಪೂಜ್ಯ ವಿಶ್ವಾತ್ಮಕ ಗುರುದೇವ್ ರವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ  ಈ ಆಶ್ರಮವನ್ನು ಸ್ಥಾಪಿಸಲಾಗಿದೆ.

ಈ ಆಶ್ರಮವು ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮತ್ತು ಉತ್ತರಾಂಚಲ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಈ ಆಶ್ರಮಗಳಲ್ಲಿ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಆಶ್ರಮವು ಪ್ರಾಥಮಿಕ ಶಾಲೆ, ಡಿ.ಎಡ್ ಕಾಲೇಜು, ಮಲ್ಲಯುದ್ಧ ಕೇಂದ್ರ, ಧ್ಯಾನ ಮಂದಿರ, ಧ್ಯಾನ ಯೋಗ ಶಿಬಿರ, ಉಚಿತ ಊಟ ಮತ್ತು ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ.


ಆಶ್ರಮದ ಸಂಪರ್ಕದ ವಿವರಗಳು: 

ವಿಶ್ವಾತ್ಮಕ ಜಂಗ್ಲಿ ಮಹಾರಾಜ್ ಆಶ್ರಮ ಟ್ರಸ್ಟ್
ಶಿರಡಿ-ಕೋಪರಗಾವ್ ರಸ್ತೆ, ಕೋಕಮಥಾನ್,
ಜೇಯೊರ್ ಕುಂಭಾರಿ ಅಂಚೆ,
ಕೋಪರಗಾವ್ ತಾಲ್ಲೂಕು - 423 601,
ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆಗಳು: +91 2423 – 285 166 / 285 473 / 285 455 / 285 445
ಇ-ಮೈಲ್ ವಿಳಾಸ: manager@vishwatmak.org
ಅಂತರ್ಜಾಲ ತಾಣ: www.vishwatmak.org 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, August 7, 2012

ಸಾಯಿ ಪರಿವಾರ್ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ನ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿ ಪರಿವಾರ್ ಟ್ರಸ್ಟ್ , ಹೆಚ್.ಎಸ್.ಆರ್ ಬಡಾವಣೆ, ಬೆಂಗಳೂರು ವತಿಯಿಂದ 28ನೇ ಜುಲೈ 2012, ಶನಿವಾರ ರಾತ್ರಿ 9:00 ರಿಂದ ಭಾನುವಾರ ಬೆಳಿಗ್ಗೆ 6:00 ರವರೆಗೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪ್ಯಾಲೇಸ್ ಗ್ರೌಂಡ್ ನಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ಎಂಬ ಶೀರ್ಷಿಕೆಯಡಿಯಲ್ಲಿ  ಶಿರಡಿಯ ಪ್ರಖ್ಯಾತ ನಾಟಕ ತಂಡವಾದ "ಶ್ರೀ.ಬಬ್ಲು ದುಗ್ಗಾಲ್ ಮತ್ತು ತಂಡ" ದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.





ಕಾರ್ಯಕ್ರಮವನ್ನು ಬೆಂಗಳೂರಿನ ಸಂಸತ್ ಸದಸ್ಯರಾದ ಶ್ರೀ.ಅನಂತ ಕುಮಾರ್ ರವರು ಉದ್ಘಾಟಿಸಿದರು.

ಶ್ರೀ.ಬಬ್ಲು ದುಗ್ಗಾಲ್ ರವರು ತಮ್ಮ ಸುಮಧುರ ಸಾಯಿ ಭಜನೆ ಹಾಗೂ ನಿರೂಪಣೆಯ ಮುಖಾಂತರ ನೆರೆದಿದ್ದ ಸಾಯಿ ಭಕ್ತರನ್ನು ರಾತ್ರಿಯಿಡೀ ರಂಜಿಸಿದರು. ಸಾಯಿಭಕ್ತರು ಶ್ರೀ.ಬಬ್ಲು ದುಗ್ಗಾಲ್ ರವರ ಭಜನೆಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸರಿಯಾಗಿ ಮಧ್ಯರಾತ್ರಿಯ ವೇಳೆಗೆ ಪ್ರಾಂಗಣದಲ್ಲಿದ್ದ ಎಲ್ಲಾ ದೀಪಗಳನ್ನು ನಂದಿಸಲಾಯಿತು ಮತ್ತು ಎಲ್ಲಾ ಸಾಯಿಭಕ್ತರಿಗೂ ಬೆಳಗಿಸಿದ ಕ್ಯಾಂಡಲ್ ಗಳನ್ನು ನೀಡಲಾಯಿತು. ಆ ಸುಂದರ ಕ್ಯಾಂಡಲ್ ನ ಬೆಳಕಿನಲ್ಲಿ ಶ್ರೀ.ಬಬ್ಲು ದುಗ್ಗಾಲ್ ರವರು "Jyoth Se Jyoth Jalathe Chalo….” ಎಂಬ ಸುಮಧುರ ಸಾಯಿ ಭಜನೆಯನ್ನು ಹಾಡುವ ಮುಖಾಂತರ ರಂಜಿಸಿದ್ದುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.








ಶಿರಡಿಯಲ್ಲಿರುವ ದ್ವಾರಕಾಮಾಯಿಯ ಪ್ರತಿರೂಪವನ್ನು ಮುಂಬೈನ ಪ್ರಖ್ಯಾತ ಕಲಾವಿದರ ತಂಡವು ಪುನರ್ ನಿರ್ಮಾಣ ಮಾಡಿದ್ದು ಈ ಬೃಹತ್ ಶಿರಡಿ ಸಾಯಿಬಾಬಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸಾಯಿಭಕ್ತರು ಮಹಾಪ್ರಸಾದವನ್ನು ದ್ವಾರಕಾಮಾಯಿಯ ಪ್ರತಿರೂಪವನ್ನು ನಿರ್ಮಿಸಿದ ಪ್ರಾಂಗಣದ ಒಳಗೇ ಸ್ವೀಕರಿಸುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿತ್ತು.



ಸಾವಿರಾರು ಸಾಯಿಭಕ್ತರು ಈ ಸುಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವು ಶಿರಡಿ ಸಾಯಿಬಾಬಾರವರಿಗೆ ವಿಶೇಷ ಆರತಿ ಬೆಳಗುವುದರೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದವನ್ನು ವಿತರಿಸಲಾಯಿತು.

ಕನ್ನಡ ಅನುವಾದ: ಶ್ರೀಕಂಠ ಶರ್ಮ